Advertisement

ಅಪಘಾತದಿಂದ ಗಾಯಗೊಂಡು ನರಳಾಡುತ್ತಿದ್ದ ಹೋರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದೆ ಸ್ಥಳೀಯರು

03:15 PM Aug 29, 2020 | sudhir |

ರಾಯಚೂರು: ಟಂಟಂ ಆಟೊ ಕಾಲು ಮೇಲೆ ಹರಿದ ಪರಿಣಾಮ ಗಾಯಗೊಂಡು ನರಳಾಡುತ್ತಿದ್ದ ಬಿಡಾಡಿ ಹೋರಿಗೆ ಇಲ್ಲಿನ ಸ್ಥಳೀಯರು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ನಗರದ ಮೋಚಿವಾಡ ಬಳಿ ಆಟೋ ಹರಿದ ಪರಿಣಾಮ ಹೋರಿಯ ಕಾಲಿಗೆ ಗಂಭೀರ ಗಾಯಗೊಂಡು ಹೋರಿ ನರಳುತ್ತಿತ್ತು. ರಕ್ತ ಸೋರುತ್ತಿದ್ದರೂ ಹಾಗೆ ಓಡಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ರಾಯಚೂರು ಬ್ಲಡ್ ಬ್ಯಾಂಕ್ ಮುಖ್ಯಸ್ಥ ವೀರರಾಜು ಅವರಿಗೆ ತಿಳಿಸಿದ್ದಾರೆ. ಅವರು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಈ ವೇಳೆ ಇಲ್ಲಿನ ಸ್ಥಳೀಯರು ಹೋರಿಯನ್ನು ವಾಹನದಲ್ಲಿ ಹಾಕಿಕೊಂಡು ವೈದ್ಯರ ಬಳಿಗೆ ಬಂದು ಗಾಯಗೊಂಡ ಕಾಲನ್ನು ಸ್ವಚ್ಛವಾಗಿ ತೊಳೆದು ಔಷಧ ಹಾಕಿ ಬ್ಯಾಂಡೇಜ್ ಹಾಕಿ ಕಳುಹಿಸಲಾಗಿದೆ.

ಸುತ್ತ ಮುತ್ತಲಿನ ಪ್ರದೇಶದಲ್ಲಿ ಇಂಥ ಜಾನುವಾರುಗಳಿದ್ದರೆ ಮಾಹಿತಿ ನೀಡಿದರೆ ಚಿಕಿತ್ಸೆ ಕೊಡಿಸುವ ಯತ್ನ ಮಾಡುವುದಾಗಿ ಬ್ಲಡ್ ಬ್ಯಾಂಕ್ ನ ವೀರ ರಾಜು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next