Advertisement

ರಾಮನಗರ ಬಂದ್:‌ ರಸ್ತೆಗಿಳಿಯದ ಬಸ್‌ ಗಳು; ಜನಜೀವನ ಅಸ್ತವ್ಯಸ್ತ

11:11 AM Sep 06, 2019 | Team Udayavani |

ರಾಮನಗರ; ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಡಿ ಕೆ ಶಿವಕುಮಾರ್‌ ಅವರ ಬಂಧನ ವಿರೋಧಿಸಿ ಇಂದು ಕೂಡಾ ರಾಮನಗರ ಜಿಲ್ಲೆಯಲ್ಲಿ ಬಂದ್‌ ಗೆ ಕರೆ ಕೊಟ್ಟಿದ್ದು, ಭಾರಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

Advertisement

ಬಂದ್‌ ಹಿನ್ನಲೆಯಲ್ಲಿ ಯಾವುದೇ ಕೆಎಸ್‌ ಆರ್‌ ಟಿಸಿ ಬಸ್‌ ಗಳು ರಸ್ತೆಗಿಳಿದಿಲ್ಲ. ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಇದರಿಂದಾಗಿ ಜನರು ಕಷ್ಟಕರವಾಗಿದೆ.

ಡಿಕೆಶಿ ಬಂಧನ ವಿರೋಧಿಸಿ  ಬುಧವಾರ ಪ್ರತಿಭಟನೆಗಳು ನಡೆದಿದ್ದವು. ಹಲವು ಕಡೆ ಬಸ್‌ ಗಳಿಗೆ ಬೆಂಕಿ ಹಚ್ಚಿದ್ದ, ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಇಂದು ಕೂಡಾ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಕಾರಣ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next