Advertisement

ಜಯಾ ಅಣಕು ಶವಪೆಟ್ಟಿಗೆ ಮುಂದಿಟ್ಟು ಮತಯಾಚನೆ

03:45 AM Apr 07, 2017 | Team Udayavani |

ಚೆನ್ನೈ/ನವದೆಹಲಿ: ಚುನಾವಣಾ ಪ್ರಚಾರಕ್ಕೆ ಎಂಥೆಂಥಾ ತಂತ್ರಗಳನ್ನು ಅನುಸರಿತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಚೆನ್ನೈನ ಆರ್‌.ಕೆ.ನಗರ ಕ್ಷೇತ್ರಕ್ಕೆ 12ರಂದು ನಡೆಯಲಿರುವ ಉಪ-ಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಎಐಎಡಿಎಂ ಕೆಯ ಓ.ಪನ್ನೀರ್‌ಸೆಲ್ವಂ ಬಣದ ಕಾರ್ಯಕರ್ತರು ಮಾಜಿ ಸಿಎಂ ದಿ.ಜಯಲಲಿತಾ ಅವರನ್ನು ಶವದ ಪೆಟ್ಟಿಗೆಯಲ್ಲಿ ಮಲಗಿಸಿದ ಪ್ರತಿಕೃತಿ ಹೊತ್ತುಕೊಂಡು ಪ್ರಚಾರ ನಡೆಸಿದ್ದಾರೆ. 

Advertisement

ಗುರುವಾರ ಈ ಬೆಳವಣಿಗೆ ನಡೆದಿದೆ. ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ ಶವಪೆಟ್ಟಿಗೆಯ ಪ್ರತಿಕೃತಿ ಹೊತ್ತುಕೊಂಡು ಮತ ಯಾಚಿಸುವ ವಿಡಿಯೋ ದೃಶ್ಯಾವಳಿಗಳು ರಾಷ್ಟ್ರೀಯ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾ ಡಿದವು. ಹಲವಾರು ಮಂದಿ ಅದನ್ನು ಖಂಡಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ತಮಿಳುನಾಡು ಮುಖ್ಯ ಚುನಾವಣಾಧಿಕಾರಿಯಿಂದ ಕ್ಷಿಪ್ರವಾಗಿ ಮಾಹಿತಿ ಕೇಳಿ, ಮಾಜಿ ಸಿಎಂ ಓ.ಪನ್ನೀರ್‌ಸೆಲ್ವಂ ಬಣಕ್ಕೆ ಛೀಮಾರಿ ಹಾಕಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ತರಾಟೆಗೆ ತೆಗೆದುಕೊಂಡಿದೆ. ಎಡವಟ್ಟಿನ ಬಗ್ಗೆ ಟೀಕೆ ವ್ಯಕ್ತವಾದ ಬಳಿಕ ಅಚಾತುರ್ಯಕ್ಕೆ ಪನ್ನೀರ್‌ಸೆಲ್ವಂ ಕ್ಷಮೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next