Advertisement

ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗ ಆರ್‌ಜೆಡಿ ಘೋಷಣೆ ಬೋಗಸ್‌: ನಿತೀಶ್‌

10:53 AM Nov 03, 2020 | Nagendra Trasi |

ಪಾಟ್ನಾ: ಅಧಿಕಾರಕ್ಕೆ ಬಂದರೆ ಹತ್ತು ಲಕ್ಷ ಉದ್ಯೋಗ ನೀಡುವುದಾಗಿ ವಾಗ್ಧಾನ ಮಾಡಿರುವ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಘೋಷಣೆ ಬೋಗಸ್‌ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಶುಕ್ರವಾರ ಲೇವಡಿ ಮಾಡಿದ್ದಾರೆ.

Advertisement

ಮತದಾರರನ್ನು ಗೊಂದಲಕ್ಕೀಡು ಮಾಡುವ ನಿಟ್ಟಿನಲ್ಲಿ ಇಂಥ ಮಾತುಗಳನ್ನಾಡಲಾಗುತ್ತದೆ ಎಂದು ಪರ್ಬತ್ತಾ ಎಂಬಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಟೀಕಿಸಿದರು.

ಇದೇ ವೇಳೆ ಸಿವಾನ್‌, ಬೆಗುಸರೈನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಚಾರ ನಡೆಸಿದರು. ತಾರಾ ಪ್ರಚಾರಕ ಪಟ್ಟ ಹಿಂದಕ್ಕೆ: “ನೈತಿಕ ಮತ್ತು ಗೌರವ ಪೂರ್ವಕವಾಗಿ ವರ್ತಿಸಿಲ್ಲ’ ಎಂಬ ಕಾರಣಕ್ಕೆ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್‌ಗೆ ನೀಡಲಾಗಿರುವ “ತಾರಾ ಪ್ರಚಾರಕ’ ಎಂಬ ಪಟ್ಟವನ್ನು ಆಯೋಗ ವಾಪಸ್‌ ಪಡೆದಿದೆ. ಅವರು ಪದೇ ಪದೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು  ಆಯೋಗ ಹೇಳಿದೆ.

ಕಾಂಗ್ರೆಸ್‌ ನಾಯಕರಾದ ಕಮಲ್‌ ನಾಥ್‌ ಮತ್ತು ದಿಗ್ವಿಜಯ ಸಿಂಗ್‌ ವಿರುದ್ಧ “ಚುನ್ನು-ಮುನ್ನು’ ಎಂದು ಲೇವಡಿ ಮಾಡಿದ್ದ ಬಿಜೆಪಿ ನಾಯಕ ಕೈಲಾಸ್‌ ವಿಜಯ ವರ್ಗೀಯ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಅಭಿಪ್ರಾಯ  ಪಟ್ಟಿದೆ. ಈ ಬಗ್ಗೆ ಅ.26ರಂದು ಆಯೋಗ ನೋಟಿಸ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next