Advertisement

ಕೋಡಿಬೆಂಗ್ರೆ ಬಂದರು ಸಮೀಪ ನದಿ ಕೊರೆತ: ಅಪಾಯದಲ್ಲಿವೆ ಕೆಲವು ಮನೆಗಳು

10:22 AM Jul 05, 2019 | sudhir |

ಮಲ್ಪೆ: ಕೋಡಿಬೆಂಗ್ರೆ ಬಂದರು ಸಮೀಪದ ಪ್ರದೇಶದಲ್ಲಿ ನದಿ ಕೊರೆತ ಕಾಣಿಸಿಕೊಂಡಿದೆ. ಸಮೀಪದ 6 ಮನೆಗಳು ಅಪಾಯದಲ್ಲಿದ್ದು, ಮನೆ ಮಂದಿ ಆತಂಕಿತರಾಗಿದ್ದಾರೆ.

Advertisement

ಕೋಡಿಬೆಂಗ್ರೆ ಮೀನುಗಾರಿಕೆ ಜೆಟ್ಟಿ ಸಮೀಪದ, ಮಸೀದಿಯ ಎದುರುಗಡೆ ಸುವರ್ಣ ನದಿಯಲ್ಲಿ ಕೊರೆತ ಕಾಣಿಸಿ ಕೊಂಡಿದ್ದು ತೆರೆಗಳು ದಡವನ್ನು ಅಪ್ಪಳಿಸುತ್ತಿವೆೆ. ಸುಮಾರು 20ಅಡಿಗಳಷ್ಟು ಭೂ ಭಾಗವು ಕೊರೆತವಾಗಿದ್ದು, ಮರಮಟ್ಟುಗಳು ನದಿ ಪಾಲಾಗಿವೆೆ. ಸಮೀಪದ ಮನೆಗಳ ಬುಡದವರೆಗೂ ನದಿ ನೀರು ಮುನ್ನುಗ್ಗಿ ಬರುತ್ತಿದ್ದು, ಸುರೇಶ್‌ ಜಿ. ಕುಂದರ್‌, ಬೇಬಿ ತಿಂಗಳಾಯ, ದಿನೇಶ್‌ ಎಸ್‌. ಕೋಟ್ಯಾನ್‌, ಸುಶೀಲಾ ಖಾರ್ವಿ, ಚಿತ್ರಾ ಖಾರ್ವಿ ಅವರ ಮನೆಗಳು ಅಪಾಯದಲ್ಲಿವೆ.

ಕೊರೆತಗೊಂಡ ಪ್ರದೇಶದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಈಗಾಗಲೇ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದರ ಮಧ್ಯೆ 150 ಮೀಟರ್‌ವರೆಗೆ ಯಾವುದೇ ತಡೆಗೋಡೆ ಇಲ್ಲದ ಕಾರಣ ನೀರಿನ ಒತ್ತಡಕ್ಕೆ ಕೊರೆತವಾಗುತ್ತಿದೆ. ಈ ಭಾಗದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಇಲ್ಲಿನ ನಾಗರಿಕರು ಸಂಬಂಧಪಟ್ಟ ಜನಪ್ರತಿನಿಧಿ ಗಳಿಗೆ, ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಹೂಳೆತ್ತದಿರುವುದು ಕಾರಣ ?

ಕುಂದಾಪುರ ವಿಧಾನಸಭಾ ಕ್ಷೇತ್ರ, ಕೋಡಿ ಗ್ರಾಮ ಪಂಚಾಯತ್‌ಗೆ ಸೇರಿದ (ಮಲ್ಪೆ ಠಾಣಾ ವ್ಯಾಪ್ತಿ) ಕೋಡಿಬೆಂಗ್ರೆಯ ಈ ಪ್ರದೇಶವು ನದಿ ಸಮುದ್ರ ಸಂಗಮದ ಸಮೀಪದ ಪ್ರದೇಶವಾಗಿದೆ.

Advertisement

ಮಳೆಗಾಲದಲ್ಲಿ ಇಲ್ಲಿ ಸಮುದ್ರದ ಏರಿಳಿತದ ಪ್ರಭಾವ ಇರುತ್ತದೆ. ಮೀನುಗಾರಿಕೆ ಬಂದರು ಸಮೀಪದ ಈ ನದಿಯಲ್ಲಿ ಈ ಬಾರಿ ಹೂಳೆತ್ತದಿರುವುದರಿಂದ ನದಿಯ ಆಳ ಕಡಿಮೆಯಾಗಿ ಮಳೆಗಾಲ ನದಿ ತುಂಬಿ ಹರಿದು ಕೊರೆತ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.

ನದಿಯಲ್ಲಿ ಹೂಳು ತೆಗೆಯದ ಕಾರಣ ನದಿ ಆಳವಿಲ್ಲದೆ ತೆರೆಗಳು ದಂಡೆಗೆ ಅಪ್ಪಳಿಸುತ್ತಿವೆೆ. ಇದರಿಂದ 4-5 ಮನೆಗಳಿಗೆ ಸಮಸ್ಯೆ ಉಂಟಾಗಿದೆ. ಸುಮಾರು 150 ಮೀಟರ್‌ ತಡೆಗೋಡೆ ನಿರ್ಮಾಣ ಮಾಡುವಲ್ಲಿ ತುರ್ತು ಕ್ರಮ ತೆಗೆದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next