Advertisement

ಸಚಿವ ಗೋಯಲ್‌ಗೆ ತಿರುಗೇಟು ನೀಡಿದ ರಿತೇಶ್‌ ದೇಶ್‌ಮುಖ್‌

09:52 AM May 15, 2019 | Team Udayavani |

ಹೊಸದಿಲ್ಲಿ: 26/11 ರ ಮುಂಬಯಿ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿ  ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್‌ ರಾವ್‌ ದೇಶ್‌ ಮುಖ್‌ ಅವರನ್ನು ಟೀಕಿಸಿದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ನಟ ರಿತೇಶ್‌ ದೇಶ್‌ಮುಖ್‌ ತಿರುಗೇಟು ನೀಡಿದ್ದಾರೆ.

Advertisement

ಟ್ವೀಟ್‌ನಲ್ಲಿ ಆರೋಪಕ್ಕೆ ತಿರುಗೇಟು ನೀಡಿರುವ ರಿತೇಶ್‌, ಗೌರವಾನ್ವಿತ ಸಚಿವರೇ , ನಿಮಗೆ ಮುಖ್ಯಮಂತ್ರಿಯನ್ನುಪ್ರಶ್ನಿಸುವ ಎಲ್ಲಾ ಹಕ್ಕಿದೆ.ಆದರೆಯಾರು ಈಗ ನಮ್ಮೊಂದಿಗೆ ಸ್ಪಷ್ಟನೆ ನೀಡಲು ಇಲ್ಲವೋ ಅವರ ಬಗ್ಗೆ ಹೇಳುವುದು ತಪ್ಪು. ಹೌದು ನೀವು ಹೇಳಿತಂತೆನಾನು ತಾಜ್‌ . ಓಬೇರಾಯ್‌ ಹೊಟೇಲ್‌ಗೆ ಭೇಟಿ ನೀಡಿದ್ದೆ.ಆದರೆ ಗುಂಡಿನ ಮತ್ತು ಬಾಂಬ್‌ ದಾಳಿಯಾಗುವನಾನಲ್ಲಿ ಇದ್ದೆ ಅನ್ನುವುದು ಸುಳ್ಳು. ನಾನು ನನ್ನ ತಂದೆ ಯೊಂದಿಗೆ ತೆರಳಿದ್ದು ನಿಜ ಆದರೆ ಅವರು ಚಿತ್ರವೊಂದರಲ್ಲಿ ನನಗೆ ಪಾತ್ರ ಪಡೆಯುವ ಕುರಿತು ಮಾತುಕತೆ ನಡೆಸುತ್ತಿದ್ದರು ಎನ್ನುವುದು ಸುಳ್ಳು. ಅವರು ಎಂದೂ ನನ್ನ ಸಿನಿಮಾ ಪಾತ್ರಕ್ಕಾಗಿ ನಿರ್ಮಾಪಕ, ನಿರ್ದೇಶಕರ ಬಳಿ ಮಾತನಾಡಿದವರಲ್ಲ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಸ್ವಲ್ಪ ತಡವಾಯಿತು. 7 ವರ್ಷಗಳ ಹಿಂದಾದರೆ ಅವರೆ ಉತ್ತರ ನೀಡುತ್ತಿದ್ದರು.ನಿಮ್ಮ ಪ್ರಚಾರಕ್ಕೆ ನನ್ನ ಶುಭ ಹಾರೈಕೆಗಳು ಸರ್‌. ಎಂದು ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

ಗೋಯಲ್‌ ಅವರು ಭಾನುವಾರ ಮುಂಬಯಿಯಲ್ಲಿ ಚುನಾವಣಾ ಪ್ರಚಾರದ ವೇಳೆ ವಿಲಾಸ್‌ ರಾವ್‌ ದೇಶ್‌ಮುಖ್‌ 2008 ರಲ್ಲಿ ಮುಂಬಯಿ ಉಗ್ರ ದಾಳಿ ನಡೆದಿದ್ದ ವೇಳೆಅಂದಿನ ಮುಖ್ಯಮಂತ್ರಿ ವಿಲಾಸ್‌ ರಾವ್‌ ದೇಶ್‌ಮುಖ್‌ ಮಗನ ಸಿನಿಮಾ ಪಾತ್ರದ ಕುರಿತು ನಿರ್ಮಾಪಕರ ಜೊತೆ ಮಾತುಕತೆ ನಡೆಸುತ್ತಿದ್ದರು. ಕಾಂಗ್ರೆಸ್‌ ದುರ್ಬಲ ಸರ್ಕಾರವಾಗಿ ಎನನ್ನೂ ಮಾಡಿರಲಿಲ್ಲ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next