Advertisement

Rishabh Pant; ಎರಡು ತಿಂಗಳು ಹಲ್ಲುಜ್ಜಲೂ ಆಗಿಲ್ಲ…

11:06 PM May 28, 2024 | Team Udayavani |

ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಅಪಘಾತಕ್ಕೆ ಒಳಗಾದ ಅನಂತರ 2 ತಿಂಗಳವರೆಗೆ ನನಗೆ ಹಲ್ಲುಜ್ಜಲೂ ಆಗುತ್ತಿರಲಿಲ್ಲ ಎಂದು ರಿಷಭ್‌ ಪಂತ್‌ ಹೇಳಿಕೊಂಡಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದ್ದ ಪಂತ್‌, ಬದುಕುಳಿದಿದ್ದೇ ಪವಾಡವಾಗಿತ್ತು. ಆ ಬಗ್ಗೆ ಶಿಖರ್‌ ಧವನ್‌ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

Advertisement

ಆ ಸಂದರ್ಭದಲ್ಲಿ ಅಸಾಧ್ಯ ನೋವಾಗುತ್ತಿತ್ತು. ಬದುಕುಳಿಯುವ ಬಗ್ಗೆ ನಂಬಿಕೆಯೇ ಇರಲಿಲ್ಲ. ನಾನು ವೀಲ್‌ಚೇರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲು ಹೆದರುತ್ತಿದ್ದೆ. ಅಂತಹ ಸ್ಥಿತಿಯಲ್ಲಿ ನನಗೆ ಜನರನ್ನು ಎದುರಿಸುವ ಧೈರ್ಯ ಇರಲಿಲ್ಲ ಎಂದು ಪಂತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next