Advertisement

Karnataka: ಬರ ತಾಲೂಕುಗಳಿಗೆ ಅಕ್ಕಿ?

02:38 AM Sep 16, 2023 | Team Udayavani |

ಬೆಂಗಳೂರು: ರಾಜ್ಯದ 195 ಬರಪೀಡಿತ ತಾಲೂಕುಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಹಣದ ಬದಲು ಅಕ್ಕಿಯನ್ನೇ ನೀಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

Advertisement

ರಾಜ್ಯದಲ್ಲಿರುವ 1.03 ಕೋಟಿ ಪಡಿತರ ಚೀಟಿಯ 3.69 ಕೋಟಿ ಫ‌ಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಲಾಗುತ್ತಿದೆ. ಈಗ ಬರ ಎದುರಾಗಿರುವ ಹಿನ್ನೆಲೆಯಲ್ಲಿ ಅಕ್ಕಿ ಹೊಂದಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದೆ.

236 ತಾಲೂಕುಗಳ 3.69 ಕೋಟಿ ಫ‌ಲಾನುಭವಿಗಳಿಗೆ ಹೆಚ್ಚುವರಿ ಯಾಗಿ ತಲಾ 5 ಕೆ.ಜಿ.ಯಂತೆ ಒಟ್ಟು 2.40 ಲಕ್ಷ ಟನ್‌ ಬೇಕಿತ್ತು. ಆದರೆ 195 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದರಿಂದ ಫ‌ಲಾನುಭವಿಗಳ ಪ್ರಮಾಣ ಕಡಿಮೆ ಆಗಲಿದೆ. ಅದರಲ್ಲೂ 161 ತಾಲೂಕಿನಲ್ಲಿ ತೀವ್ರ ಬರವಿದ್ದು, 34 ತಾಲೂಕಿನಲ್ಲಿ ಸಾಧಾರಣ ಬರ ಇದೆ. ಬರಪೀಡಿತ ತಾಲೂಕುಗಳ ಫ‌ಲಾನುಭವಿಗಳಿಗೆ ಅಕ್ಕಿ ಕೊಡುವ ತೀರ್ಮಾನ ಮಾಡಿದರೆ ಹೆಚ್ಚುವರಿಯಾಗಿ 1.50 ಲಕ್ಷ ಟನ್‌ ಅಕ್ಕಿ ಖರೀದಿಸಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next