Advertisement

ಶ್ರೀರಂಗಪಟ್ಟಣ ದಸರಾ ಸಿದ್ಧತೆಗಳ ಪರಿಶೀಲನೆ

04:52 PM Sep 27, 2019 | Suhan S |

ಶ್ರೀರಂಗಪಟ್ಟಣ : ಪ್ರಸಕ್ತ ವರ್ಷದ ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಮಹೋತ್ಸವದಲ್ಲಿ ಮನರಂಜನಾ ಕಾರ್ಯಕ್ರಮಕ್ಕೆ ಖ್ಯಾತ ಗಾಯಕರಾದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ವಿಜಯಪ್ರಕಾಶ್‌ ಅವರನ್ನು ಆಹ್ವಾನಿಸ ಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

Advertisement

ಬೆಂಗಳೂರು-ಮೈಸೂರು ಹೆದ್ದಾರಿಯ ಕಿರಂಗೂರು ವೃತ್ತದಲ್ಲಿರುವ ದಸರಾ ಬನ್ನಿಮಂಟಪದ ಬಳಿ ದಸರಾ ಸಿದ್ದತೆ ವೀಕ್ಷಿಸಿ ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವ ವೈಭವದಿಂದ ನೆರವೇರಿಸಲು ಎಲ್ಲಾ ಸಿದ್ಧತೆಗಳನ್ನು ಸಮರ್ಪಕವಾಗಿ ಪೂರೈಸಬೇಕು. ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಮಹೋತ್ಸವದ ಪ್ರಮುಖ ಸ್ಥಾನ ಬನ್ನಿಮಂಟಪ ಅಭಿವೃದ್ಧಿಗೆ ಕಳೆದ ವರ್ಷವೇ 50 ಲಕ್ಷ ರೂ. ಮಂಜೂರು ಮಾಡಲಾಗಿದೆ. ತಾಂತ್ರಿಕ ಅಡೆ-ತಡೆಗಳಿಂದ ತಡವಾಗಿದೆ. ಜಂಬೂ ಸವಾರಿಗಾಗಿ ವಿಶೇಷ ಕಾಮಗಾರಿ ನಡೆಸಲಾಗುವುದು ಎಂದರು.

ಸಿಎಂಗೆ ವಿಶೇಷ ಆಹ್ವಾನ: ನಾಲ್ಕು ದಿನ ಪಾರಂಪರಿಕ ದಸರಾ ಕಾರ್ಯಕ್ರಮ ಆಯೋಜಿಸಿದ್ದು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಜತೆಗೆ ಜಿಲ್ಲಾಉಸ್ತುವಾರಿ ಸಚಿವವರು ಸೇರಿದಂತೆ ಜಿಲ್ಲೆಯ ಶಾಸಕರನ್ನೂ ಆಹ್ವಾನಿಸಲಾಗಿದೆ ಎಂದರು.

ಕಲಾವಿದರಿಗೆ ಆದ್ಯತೆ: ಚಾಮುಂಡೇಶ್ವರಿ ಮೆರವಣಿಗೆಯ ಜಂಬೂಸವಾರಿ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಮತ್ತು ಜನಪದ ಕಲಾವಿದರಿಗೆ ಹೆಚ್ಚು ಅವಕಾಶ ಕಲ್ಪಿಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ದಂಪತಿಯ ಜುಗಲ್‌ಬಂಧಿ ಕಾರ್ಯಕ್ರಮ, ಸಿನಿಮಾ ನಟರ ಕಾಮಿಡಿ ಷೋ ಹಾಗೂ ಮೈಸೂರಿನ ದಸರಾ ಮಾದರಿಯಲ್ಲಿ ಶ್ರೀರಂಗಪಟ್ಟಣದಲ್ಲೂ ಆಹಾರ ಮೇಳ ಹಾಗೂ ಹಳ್ಳಿ ದಸರಾ, ಯುವ ದಸರಾ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಹೇಳಿದರು.

ಈ ವೇಳೆ ಉಪ ವಿಭಾಗಾಧಿಕಾರಿ ಶೈಲಜಾ, ಡಿವೈಎಸ್ಪಿ ಯೋಗೇಂದ್ರನಾಥ್‌, ತಹಶೀಲ್ದಾರ್‌ ನಾಗೇಶ್‌, ಸಿಪಿಐ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಹಾಗೂ ಪುರಸಭೆ ಸದಸ್ಯರು, ತಾಪಂ, ಗ್ರಾಪಂ ಜನಪ್ರತಿನಿಧಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next