Advertisement

Hindus ಮೇಲೆ ಸೇಡಿನ ದಾಳಿ: ಆಕ್ರೋಶದ ಬಳಿಕ ಪತ್ರಿಕೆ ಶೀರ್ಷಿಕೆ ಬದಲು

01:58 AM Aug 09, 2024 | Team Udayavani |

 ಹೊಸದಿಲ್ಲಿ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ದೇಶದಿಂದ ಹೊರನಡೆದ ಬಳಿಕ ಹಿಂದೂ ದೇಗುಲಗಳು ಹಾಗೂ ಅಲ್ಪಸಂಖ್ಯಾಕರ ಮನೆಗಳ ಮೇಲೆ ನಡೆದ ದಾಳಿಗಳನ್ನು “ಹಿಂದೂಗಳ ವಿರುದ್ಧದ ಪ್ರತೀಕಾರದ ದಾಳಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ದಾದ್ಯಂತ ಜನರು ಸಾಮಾಜಿಕ ಜಾಲತಾಣಗಳಲ್ಲಿ ಈ ತಲೆಬರಹವನ್ನು ಟೀಕಿಸಿದ ಬೆನ್ನಲ್ಲೇ ಪತ್ರಿಕೆಯು ತಲೆಬರಹವನ್ನು ಬದಲಾಯಿಸಿದೆ.

Advertisement

ಪತ್ರಿಕೆ ಕಡೆಯಿಂದ ಯಾವುದೇ ಸ್ಪಷ್ಟನೆ ಅಥವಾ ಕ್ಷಮಾಪಣೆ ಬಾರದೇ ಇರುವುದನ್ನೂ ಜನರು ಟೀಕಿಸಿದ್ದಾರೆ. ಬಾಂಗ್ಲಾದಲ್ಲಿ ಮೀಸಲು ಸಂಬಂಧ ಆರಂಭವಾದ ಪ್ರತಿಭಟನೆ ದೇಶಾದ್ಯಂತ ದಂಗೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next