Advertisement

“ಗಬ್ಬರ್ ಸಿಂಗ್”ಖ್ಯಾತಿಯ ನಿವೃತ್ತ ಐಪಿಎಸ್ ಅಧಿಕಾರಿ ಕೆಎಸ್ ಎನ್ ಕೋವಿಡ್ ನಿಂದ ಸಾವು

04:46 PM May 17, 2021 | Team Udayavani |

ಹೈದರಾಬಾದ್:ಗಬ್ಬರ್ ಸಿಂಗ್ ಎಂದೇ ಜನಪ್ರಿಯರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೆಎಸ್ ಎನ್ ಮೂರ್ತಿ(78ವರ್ಷ) ಸೋಮವಾರ ಕೋವಿಡ್ 19 ಸೋಂಕಿನಿಂದ ವಿಧಿವಶರಾಗಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಹೈದರಾಬಾದ್ ನ ಬಂಜಾರ್ ಹಿಲ್ಸ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ(ಮೇ 16) ನಿವೃತ್ತ ಐಪಿಎಸ್ ಅಧಿಕಾರಿ ಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 2000ನೇ ಇಸವಿಯಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಬಂಜಾರಾ ಹಿಲ್ಸ್ ನಲ್ಲಿ ವಾಸವಾಗಿದ್ದರು.

ಆಂಧ್ರಪ್ರದೇಶದಾದ್ಯಂತ ಮೂರ್ತಿಯವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಹಳೇ ಹೈದರಾಬಾದ್ ನಗರದಲ್ಲಿ ಮೊದಲು ಅಧಿಕಾರಿಯಾಗಿ ನೇಮಕಗೊಂಡಿದ್ದರು. ಚಾರ್ ಮಿನಾರ್ ಪೊಲೀಸ್ ಠಾಣೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕವಾಗಿದ್ದರು. ಈ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಿದ್ದರು ಎಂದು ವರದಿ ತಿಳಿಸಿದೆ.

ಪೊಲೀಸ್ ವಲಯದಲ್ಲಿ ಶಿಸ್ತಿನ ಅಧಿಕಾರಿ ಎಂದೇ ಹೆಸರಾಗಿದ್ದರು. ಅಲ್ಲದೇ ಬಾಲಿವುಡ್ ನ ಅಮ್ಜದ್ ಖಾನ್ ನಟನೆಯ ಶೋಲೆಯ ಗಬ್ಬರ್ ಸಿಂಗ್ ಹೆಸರಿನಲ್ಲಿ ಮೂರ್ತಿ ಕೂಡಾ ಜನಪ್ರಿಯರಾಗಿದ್ದರು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next