Advertisement

Mangaluru: ನಿವೃತ್ತ ಕರ್ನಲ್‌ ರತ್ನಕುಮಾರ್‌ ಅಡಪ ನಿಧನ

08:52 PM Oct 12, 2024 | Team Udayavani |

ಮಂಗಳೂರು:  ಭಾರತೀಯ ಸೇನೆಯ ಬೆಂಗಳೂರಿನ ಪ್ಯಾರಾ ರೆಜಿಮೆಂಟ್‌ನ ನಿವೃತ್ತ ಕರ್ನಲ್‌ ರತ್ನ ಕುಮಾರ್‌ ಅಡಪ (61 ) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ (ಅ.12ರಂದು) ಬೆಂಗಳೂರಿನಲ್ಲಿ ನಿಧನ ಹೊಂದಿದರು.

Advertisement

ಅವರು 35 ವರ್ಷ ಕಾಲ ಸೇನೆಯಲ್ಲಿ ಸೇವೆಯಲ್ಲಿದ್ದು 2021ರಲ್ಲಿ ನಿವೃತ್ತರಾಗಿದ್ದರು. ರತ್ನ ಕುಮಾರ್‌ ಅವರು ಮೂಲತಃ ಸೋಮವಾರ ಪೇಟೆ ದಿ|ಕೆ.ರಘರಾಮ ಅಡಪ ಅವರ ಪುತ್ರ.

ಅವರು ಪತ್ನಿ ಶಾಂತಲಾ ಅಡಪ, ಮತ್ತು ಪುತ್ರ ಮೋಹಿತ್‌ ಶರಣ್‌ ಅಡಪ ಅವರನ್ನು ಅಗಲಿದ್ದಾರೆ.  ಅ.13ರಂದು ಪದವು ಮೇಗಿನ  ಮನೆಯ ಬಳಿ ಇರುವ ಅವರ ಸ್ವಗೃಹ “ಅರ್ಪಣಾ’ದಲ್ಲಿ  ಮೃತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ನಂತರ ಶಕ್ತಿನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next