Advertisement

Parliament ಆವರಣದಲ್ಲಿ ಪತ್ರಕರ್ತರ ಓಡಾಟಕ್ಕೆ ನಿರ್ಬಂಧ: ಪ್ರತಿಭಟನೆ

12:15 AM Jul 30, 2024 | Team Udayavani |

ಹೊಸದಿಲ್ಲಿ: ಸಂಸತ್‌ ಭವನ ಆವರಣದಲ್ಲಿ ಪತ್ರ ಕರ್ತರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದು ಮಾತ್ರವ ಲ್ಲದೇ ಈ ಮೊದಲು ಸಂಸದರೊಂದಿಗೆ ಸಂವಹನ ನಡೆಸಲಾಗುತ್ತಿದ್ದ “ಮಕರ ದ್ವಾರ’ದಲ್ಲಿ ಪತ್ರಕರ್ತರ ಚಟುವಟಿಕೆಗಳಿಗೆ ಅವಕಾಶವನ್ನು ಸಂಸತ್ತು ನಿರಾಕರಿ ಸಿದೆ. ಸಂಸತ್ತಿನ ಹೊರಗಿರುವ ಗಾಜಿನ ಕೋಣೆ ಬಳಸುವಂತೆ ಸಂಸತ್ತು ನಿರ್ದೇಶಿಸಿದ್ದು, ಈ ನಿರ್ಧಾರದ ವಿರುದ್ಧ ಪತ್ರಕರ್ತರು ಪ್ರತಿಭಟಿಸಿದರು. ಸಂಸತ್‌ಗೆ ವಿಪಕ್ಷ ನಾಯಕ ನಾಯಕ ರಾಹುಲ್‌ ಗಾಂಧಿ ಪತ್ರಕರ್ತರ ಅಹವಾಲುಗಳನ್ನು ಆಲಿಸಿದರು. ನಂತರ ಅಧಿವೇಶನದ ಚರ್ಚೆಯ ಸಂದರ್ಭದಲ್ಲಿ ಪತ್ರಕರ್ತರ ಪ್ರತಿಭಟನೆಯನ್ನು ಉಲ್ಲೇಖೀಸಿದ ರಾಹುಲ್‌, ಪತ್ರಕರ್ತರನ್ನು ನಿರ್ಬಂಧವೆಂಬ ಗಾಜಿನ ಪಂಜರದಿಂದ ಬಿಡುಗಡೆಗೊಳಿಸಲು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next