Advertisement

ಸಲ್ಮಾನ್‌ಗೆ ನಿರ್ಬಂಧ

03:59 PM Aug 05, 2018 | Team Udayavani |

ಜೋಧ್‌ಪುರ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ವಿದೇಶ ಪ್ರವಾಸದ ಮೇಲೆ ಸ್ಥಳೀಯ ಕೋರ್ಟ್‌ ನಿರ್ಬಂಧ ಹೇರಿದೆ. ಸಲ್ಮಾನ್‌ ಅವರು ಚಿತ್ರೀಕರಣ ಪ್ರಯುಕ್ತ ಆಗಾಗ ಬೇರೆ ಬೇರೆ ರಾಷ್ಟ್ರಗಳಿಗೆ ಹೋಗಬೇಕಾಗುತ್ತದೆ ಎಂದು ಅವರ ವಕೀಲರು ವಾದಿಸಿದರು.
ಇದಕ್ಕೆ ಒಪ್ಪದ ಕೋರ್ಟ್‌, ಯಾವುದೇ ದೇಶಕ್ಕೊದರೂ ನಮ್ಮ ಒಪ್ಪಿಗೆ ಪಡೆದೇ ಹೋಗಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿತು. ಈ ಕೇಸಿನಲ್ಲಿ ಸಲ್ಮಾನ್‌ಗೆ ಏಳು ವರ್ಷಗಳ ಜೈಲು ಶಿಕ್ಷೆಯಾಗಿದ್ದು, ಜಾಮೀನು ಪಡೆದಿದ್ದಾರೆ.  ಕೋರ್ಟ್‌ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿತ್ತು.  ಇದರಿಂದ ವಿನಾಯ್ತಿ ನೀಡಬೇಕು ಎಂದು ಸಲ್ಮಾನ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next