Advertisement

ವಿದೇಶಗಳಿಂದ ಬಂದವರು, ಮನೆ ಮಂದಿಗೆ ನಿರ್ಬಂಧ

01:49 AM Mar 19, 2020 | Team Udayavani |

ಕಾಸರಗೋಡು: ಫೆಬ್ರವರಿ 20ರ ಅನಂತರ ವಿದೇಶಗಳಿಂದ, ಅನ್ಯ ರಾಜ್ಯಗಳಿಂದ ಮರಳಿರುವ ವ್ಯಕ್ತಿಗಳು, ಅವರ ಕುಟುಂಬ ಸದಸ್ಯರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಆದೇಶಿಸಿದ್ದಾರೆ.

Advertisement

ಆರಾಧನಾಲಯ ಸಹಿತ ಎಲ್ಲ ಸಾರ್ವಜನಿಕ/ಖಾಸಗಿ ಕೇಂದ್ರಗಳಲ್ಲಿ 50ಕ್ಕಿಂತ ಅಧಿಕ ಮಂದಿ ಸೇರುವುದನ್ನು 1939ರ ಮದ್ರಾಸು ಡಿಸೀಸ್‌ ಕಂಟ್ರೋಲ್‌ ಕಾಯಿದೆ 75 ಪ್ರಕಾರ ನಿಷೇಧಿಸಲಾಗಿದ್ದು ಆದೇಶ ಹೊರಡಿಸಲಾಗಿದೆ. ಆದರೆ ಇದು ಸೂಕ್ತ ರೀತಿ ಅನುಷ್ಠಾನಗೊಳ್ಳದೇ ಇದ್ದ ಪರಿಣಾಮ ಭಾರತೀಯ ದಂಡ ಸಂಹಿತೆ 269ನೇ ಕಾಯಿದೆ ಪ್ರಕಾರ ಈ ಆದೇಶ ಉಲ್ಲಂಘಿಸುವವರ ವಿರುದ್ಧ 6 ತಿಂಗಳ ಕಠಿನ ಸಜೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

409 ಮಂದಿ ನಿಗಾದಲ್ಲಿ
ಕೋವಿಡ್‌ 19 ಸೋಂಕು ಹರಡುವಿಕೆ ಸಂಬಂಧ ಜಿಲ್ಲೆಯಲ್ಲಿ 409 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 9 ಮಂದಿ ಆಸ್ಪತ್ರೆಗಳಲ್ಲೂ, 400 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ಹೊಸದಾಗಿ ಮೂವರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇಡಲಾಗಿದೆ, 25 ಮಂದಿಯ ರಕ್ತದ ಸ್ಯಾಂಪಲ್‌ ತಪಾಸಣೆಗೆ ರವಾನಿಸಲಾಗಿದೆ. 42 ಮಂದಿಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next