Advertisement

ಲಂಕೆಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ

04:07 AM May 14, 2019 | Team Udayavani |
ಕೊಲಂಬೊ: ಫೇಸ್‌ಬುಕ್‌ ಪೋಸ್ಟ್‌ನಿಂದಾಗಿ ರವಿವಾರ ಉದ್ಭವಿಸಿದ ಕೋಮು ಗಲಭೆಯನ್ನು ನಿಯಂತ್ರಿಸಲು ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈಸ್ಟರ್‌ ಹಬ್ಬದಂದು ಕಳೆದ ತಿಂಗಳು ನಡೆದ ಬಾಂಬ್‌ ಸ್ಫೋಟದ ನಂತರ ಮತ್ತೆ ಕರ್ಫ್ಯೂವನ್ನೂ ವಿಧಿಸಲಾಗಿದೆ. ಫೇಸ್‌ಬುಕ್‌ ಪೋಸ್ಟ್‌ನಿಂದ ಸಿಟ್ಟಿಗೆದ್ದ ಶ್ರೀಲಂಕಾ ಮೂಲ ನಿವಾಸಿಗಳು ಮಸೀದಿ ಹಾಗೂ ಮುಸ್ಲಿಂ ಮಾಲಕತ್ವದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದಾರೆ. ‘ತುಂಬಾ ನಗಬೇಡಿ, ಒಂದು ದಿನ ನೀವು ಅಳಬೇಕಾಗುತ್ತದೆ’ ಎಂದು ಫೇಸ್‌ಬುಕ್‌ ಪೋಸ್ಟ್‌ ಅನ್ನು ಸ್ಥಳೀಯ ಕ್ರಿಶ್ಚಿಯನ್ನರು ಬೆದರಿಕೆ ಎಂದು ಭಾವಿಸಿ, ಮುಸ್ಲಿಂ ಮಾಲೀಕತ್ವದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲು ಆರಂಭಿಸಿದರು. ಅನಂತರ ಕುಲಿಯಪಿಟಿಯಾಗೂ ಹರಡಿತು. ಹೀಗಾಗಿ ಪೊಲೀಸರು ಕರ್ಫ್ಯೂ ವಿಧಿಸಿದ್ದರು. ಸೋಮವಾರ ಇಂಟ ರ್ನೆಟ್‌ಗೂ ನಿರ್ಬಂಧ ವಿಧಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next