Advertisement

WC2023;ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಈ ಬೌಲರ್ ಗೆ ವಿಶ್ರಾಂತಿ ನೀಡಿ: ಸುನಿಲ್ ಗವಾಸ್ಕರ್

12:23 PM Oct 19, 2023 | Team Udayavani |

ಮುಂಬೈ: ಬಾಂಗ್ಲಾದೇಶದ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಭಾರತ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಬೇಕು ಎಂದು ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತವು ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದೆ. ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಧರ್ಮಶಾಲಾದಲ್ಲಿ ಎದುರಿಸಲಿದೆ. ಎರಡು ಸ್ಥಳಗಳ ನಡುವೆ ಹವಾಮಾನ ಪರಿಸ್ಥಿತಿಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಅದಕ್ಕಾಗಿಯೇ ಭಾರತವು ಪಂದ್ಯಕ್ಕಾಗಿ ಆಡುವ ಬಳಗವನ್ನು ಬದಲಾಯಿಸಲು ಮುಂದಾಗಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.

“ನನ್ನ ಪ್ರಕಾರ ಬಾಂಗ್ಲಾದೇಶ ವಿರುದ್ಧ ಮೊಹಮ್ಮದ್ ಶಮಿ ಆಡಿಸಬೇಕು. ಯಾಕೆಂದರೆ ಮುಂದಿನ ಪಂದ್ಯವಿರುವುದು ಧರ್ಮಶಾಲಾದಲ್ಲಿ. ಪುಣೆ ಮತ್ತು ಅಲ್ಲಿನ ಹಮಾಮಾನ ಪರಿಸ್ಥಿತಿಗಳು ಪೂರ್ಣ ಭಿನ್ನ. ಅಲ್ಲಿ ಬುಮ್ರಾ ಪೂರ್ಣ ಫಿಟ್ ಇರಬೇಕು. ಹೀಗಾಗಿ ಪುಣೆಯಲ್ಲಿ ಬುಮ್ರಾಗೆ ಬ್ರೇಕ್ ನೀಡಿ ಶಮಿ ಆಡಿಸುವುದು ಉತ್ತಮ” ಎಂದು ಹೇಳಿದ್ದಾರೆ.

“ಶಮಿ ತಂಡಕ್ಕೆ ಮರಳಿರುವುದರಿಂದ ನೀವು ನಿಜವಾಗಿಯೂ ಏನನ್ನೂ ಕಳೆದುಕೊಳ್ಳುವುದಿಲ್ಲ. ವಿಶ್ವಕಪ್‌ ಗೆ ಮುನ್ನ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ ಸಿರಾಜ್ ಸ್ವಲ್ಪ ವಿಶ್ರಾಂತಿ ಪಡೆದಿದ್ದರು. ಬಾಂಗ್ಲಾದೇಶದ ವಿರುದ್ಧ ಶಮಿಯನ್ನು ಆಡಿಸುವ ಬಗ್ಗೆ ಯೋಚಿಸಬಹುದಾದ ವಿಷಯ ” ಎಂದು ಗವಾಸ್ಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next