Advertisement

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ

01:44 AM Apr 18, 2024 | Team Udayavani |

ಹೊಸದಿಲ್ಲಿ: “ಭಾರತ ಮತ್ತು ಪಾಕಿಸ್ಥಾನವು ಸಂಘರ್ಷಕ್ಕೆ ಎಡೆಮಾಡಿಕೊಡದೆ, ಸೌಹಾರ್ದಯುತ ಬಾಂಧವ್ಯ ಹೊಂದಬೇಕು’ ಎಂದು ಅಮೆರಿಕ ಕಿವಿಮಾತು ಹೇಳಿದೆ. “ನವಭಾರತವು ಗಡಿಯಾಚೆಗೆ ನುಗ್ಗಿ ಉಗ್ರರನ್ನು ಕೊಲ್ಲಲು ಹಿಂದೆಮುಂದೆ ನೋಡುವುದಿಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರ ಹೇಳಿಕೆಗೆ ಸಂಬಂಧಿಸಿ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

“ನಾವು ಈ ಹಿಂದೆಯೇ ಹೇಳಿರುವಂತೆ, ಭಾರತ ಮತ್ತು ಪಾಕಿಸ್ಥಾನದ ವಿಚಾರದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಎರಡೂ ದೇಶಗಳು ಸಂಘರ್ಷಕ್ಕೆ ಎಡೆಮಾಡಿಕೊಡದೇ, ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಬೇಕು ಎಂಬ ಸಲಹೆ ನೀಡುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next