Advertisement

NEET ಪರೀಕ್ಷೆಯಿಂದ ತಮಿಳುನಾಡನ್ನು ಹೊರಗಿಡುವ ನಿರ್ಣಯ ಅಂಗೀಕಾರ

12:25 AM Jun 29, 2024 | Team Udayavani |

ಚೆನ್ನೈ: ನೀಟ್‌ ಪರೀಕ್ಷೆಯಿಂದ ತಮಿಳುನಾಡನ್ನು ಹೊರಗಿಡಬೇಕು ಮತ್ತು ಪ್ಲಸ್‌ 2 ತರಗತಿಯ ಅಂಕವನ್ನು ಆಧರಿಸಿ ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಆಗ್ರಹಿಸಿ ತಮಿಳುನಾಡು ವಿಧಾನಸಭೆ ಮತ್ತೂಮ್ಮೆ ಗೊತ್ತುವಳಿಯನ್ನು ಪಾಸ್‌ ಮಾಡಿದೆ.

Advertisement

ಈ ಗೊತ್ತುವಳಿ ಮಂಡನೆ ವೇಳೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಶಾಸಕರು ಹೊರನಡೆದಿದ್ದಾರೆ. ಆದರೆ ಬಿಜೆಪಿಯ ಮಿತ್ರಕೂಟದಲ್ಲಿರುವ ಪಿಎಂಕೆ ಗೊತ್ತುವಳಿಗೆ ಬೆಂಬಲ ನೀಡಿದೆ. ನೀಟ್‌ ಪರೀಕ್ಷೆ ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. ಈ ಸಂಬಂಧ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮುಂತಾದವರಿಗೆ ಪತ್ರ ಬರೆಯಲು ಸ್ಟಾಲಿನ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next