Advertisement

ರಾಜೀನಾಮೆ ನಮಗೆ ಮುಖ್ಯವಲ್ಲ, ಮೊದಲು ಈಶ್ವರಪ್ಪ ಬಂಧನವಾಗಬೇಕು: ಕಾಂಗ್ರೆಸ್

07:25 PM Apr 14, 2022 | Team Udayavani |

ಬೆಂಗಳೂರು : ಸುಳ್ಳು ಕಂಪನಿ ಚೇರ್ ಮೆನ್ ಈಶ್ವರಪ್ಪ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

Advertisement

ಈಶ್ವರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜೀನಾಮೆ ನಮಗೆ ಮುಖ್ಯವಲ್ಲ. ಮೊದಲು ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಇದು ನನ್ನ ಜಯವಲ್ಲ, ಸಿದ್ದರಾಮಯ್ಯ ಅವರ ಜಯವಲ್ಲ. ಇದು ರಾಜ್ಯದ ಸ್ವಾಭಿಮಾನಿ ಜನತೆಯ ಗೆಲುವು. ಪ್ರಕೃತಿ ಯ ನಿಯಮ ಇದೆ. ಅದರಂತೆ ನಡೆಯಬೇಕಾಗುತ್ತದೆ. ತುಂಬಾ ದಿನಗಳ ಕಾಲ ಸುಳ್ಳು ಹೇಳಿಕೊಂಡು ಓಡಾಡುವುದಕ್ಕೆ ಸಾಧ್ಯವಿಲ್ಲ. ಈ ಪ್ರಕರಣದ ಬಗ್ಗೆ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕೊನೆಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ ಈಶ್ವರಪ್ಪ

ತಪ್ಪು ಈಗ ಅರಿವಾಗಿದೆ : ಸಿದ್ದರಾಮಯ್ಯ

Advertisement

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಶ್ಚರಪ್ಪ ಇಲ್ಲಿಯವರೆಗೆ ಸುಳ್ಳು ಹೇಳಿಕೊಂಡಿದ್ದರು. ನಮ್ಮ ಹೋರಾಟ ಚುರುಕಾದ ಮೇಲೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅದರ ಅರ್ಥ 40% ಲಂಚದ ಆರೋಪ ನಿಜವಾದಂತಾಯ್ತು. ತಪ್ಪು ಅರಿವಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಸಂತೋಷ್ ಯಾರು ಎಂದು ಗೊತ್ತಿಲ್ಲದೇ ಮಾನನಷ್ಟ ಮೊಕದ್ದಮೆ ಹಾಕಿದ್ದರಾ ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ಸೆಕ್ಷನ್ 13 ರ ಅಡಿ ಈಶ್ವರಪ್ಪ ಮೇಲೆ ಎಫ್ ಐ ಆರ್ ಹಾಕಬೇಕು. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next