Advertisement

ಸಂಚಾರಕ್ಕೆ ಅಡ್ಡಿಯಾಗಿದ್ದ ಕಟ್ಟಡ ಅವಶೇಷ ತೆರವು

02:35 PM Sep 29, 2019 | Team Udayavani |

ಕೆಜಿಎಫ್: ನಗರದ ಅಶೋಕ ನಗರದ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳ ಬೇಕಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳ ಅವಶೇಷಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶನಿವಾರ ತೆರವು ಗೊಳಿಸಿದರು.

Advertisement

ಜೆಸಿಬಿ ಯಂತ್ರದ ಸಹಾಯದಿಂದ ಕೆಡವಲಾಗಿದ್ದ ಕಟ್ಟಡದ ತ್ಯಾಜ್ಯವನ್ನು ಟ್ರಕ್‌ಗೆ ತುಂಬಿ ಹೊರಗಡೆ ಸಾಗಿಸ ಲಾಯಿತು. ಕಂಬಿಗಳನ್ನು ಗ್ಯಾಸ್‌ ಕಟರ್‌ ನಿಂದ ತುಂಡರಿಸಲಾಯಿತು. ಸಂಪಂಗಿ ಶಾಸಕರಾಗಿದ್ದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿದ್ದರು.

ರಸ್ತೆಗೆ ನೂರಾರು ಮನೆ ತೆರವು ಮಾಡಲಾಗಿತ್ತು. ಆದರೆ, 230 ಮೀಟರ್‌ ರಸ್ತೆಯಲ್ಲಿದ್ದ ಮನೆಗಳ ಮಾಲಿಕರು ರಸ್ತೆ ಅಗಲೀಕರಣಕ್ಕೆ ತಡೆ ಯೊಡ್ಡಿದ್ದರು. ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವರೆಲ್ಲರ ಅಹವಾಲು ಕೇಳಿ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚಿಸಿತ್ತು. ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಮಂಜುನಾಥ್‌, ಅಶೋಕ ನಗರ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಕಟ್ಟಡ ಮಾಲಿಕರ ಜೊತೆ ಮಾತನಾಡಿದರು.

ಸಹಮತ ಪಡೆದು ಕಟ್ಟಡ ತೆರವು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.ಶಾಸಕಿ ರೂಪಕಲಾ ಅವರ ಮನವಿ ಮೇರೆಗೆ ಶೀಘ್ರ ವ್ಯಾಜ್ಯವನ್ನು ಇತ್ಯರ್ಥಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next