Advertisement

ಮೀಸಲಾತಿಗೆ ದಿಟ್ಟ ಹೋರಾಟಗಾರರು ಅಗತ್ಯ: ಗುರುಮೂರ್ತಿ

03:27 PM Feb 12, 2021 | Team Udayavani |

ಶಿವಮೊಗ್ಗ: ಮೀಸಲಾತಿ ಹೋರಾಟಗಳು, ಮುಕ್ತ ಅಭಿವ್ಯಕ್ತಿ, ಜನಸಾಮಾನ್ಯರ ಆಹಾರ ಮತ್ತು ವೈಯಕ್ತಿಕ ಆಯ್ಕೆಗಳನ್ನು ನಿಯಂತ್ರಿಸಲು ಹಲವು ಶಕ್ತಿಗಳು ಯತ್ನಿಸುತ್ತಿರುವ ಈ ಕಾಲಮಾನದಲ್ಲಿ ಪ್ರೊ| ಬಿ. ಕೃಷ್ಣಪ್ಪ ಅವರಂತಹ ದಿಟ್ಟ ಹೋರಾಟಗಾರರು- ಹೋರಾಟಗಳ ಅವಶ್ಯಕತೆಯಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ವಿಭಾಗದ ಸಂಚಾಲಕ ಗುರುಮೂರ್ತಿಅಭಿಪ್ರಾಯಪಟ್ಟರು. ಕುವೆಂಪು ವಿವಿಯ ಪ್ರೊ| ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಪ್ರೊ| ಹಿರೇಮಠ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ದಲಿತ ಚಳವಳಿ’ ವಿಚಾರ ಸಂಕಿರಣದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

Advertisement

ಪ್ರೊ| ಬಿ. ಕೃಷ್ಣಪ್ಪ ಅವರು ಹತ್ತಾರು ಬಗೆಯ ಸಾಮಾಜಿಕ ಹೋರಾಟಗಳನ್ನು ಸಂಘಟಿಸಿದವರು. ದಲಿತ ವ್ಯಕ್ತಿಗಳ ಕೊಲೆ ವಿರುದ್ಧ, ಅತ್ಯಾಚಾರಗಳ ವಿರುದ್ಧ ಪ್ರತಿಭಟನೆ, ಚಂದ್ರಗುತ್ತಿ ಬೆತ್ತಲೆ ಸೇವೆ ರದ್ದು, ಸಿದ್ಲಿಪುರದ ಭೂ ಹೋರಾಟ ಸೇರಿದಂತೆ ಅಸ್ಪೃಶ್ಯತೆ, ಹೆಣ್ಣುಮಕ್ಕಳ ಗೌರವ, ಜಾತಿ ನಿರ್ಮೂಲನೆ, ಸಾರ್ವಜನಿಕ ಸ್ಥಳಗಳ ಪ್ರವೇಶ, ಭೂಸುಧಾರಣೆ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ ಚಳವಳಿಗಳನ್ನು ರೂಪಿಸಿದವರು ಎಂದರು.

ಸಮುದಾಯಗಳ ಮುಂದುವರಿದ ಭಾಗವಾಗಿ ಪ್ರಭುತ್ವಗಳೇ ಇಂದು ದಲಿತರ-ಜನಸಾಮಾನ್ಯರನ್ನು ದಮನಿಸುವ ಕೆಲಸಕ್ಕೆ ಮುಂದಾಗಿವೆ. ಪ್ರೊ| ಭಗವಾನ್‌ರ ವಿಚಾರಗಳನ್ನು ವೈಚಾರಿಕವಾಗಿ ಎದುರಿಸದೇಮಸಿ ಬಳಿದು ಸಂವಿಧಾನಕ್ಕಿಂತ ಧರ್ಮ ಮುಖ್ಯ ಎನ್ನಲಾಗುತ್ತಿದೆ. ದಲಿತ ಅಸ್ಮಿತೆಯ ಮೂಲವಾದ ದಲಿತ ಪದವನ್ನೇ ಸರ್ಕಾರಿ ಪದಕೋಶದಿಂದ ತೆಗೆದು ಹಾಕುವ ಆದೇಶ ಹೊರಡಿಸಲಾಗಿದೆ. ಸರ್ಕಾರವನ್ನು ಟೀಕಿಸಿದಲ್ಲಿ ಪೊಲೀಸ್‌ ಠಾಣೆಗೆ ಕರೆಸಿ  ವ ಚಾರಣೆ ಮಾಡಲಾಗುತ್ತದೆ. ಸಮಾಜಉದ್ಧರಿಸಬೇಕಾದ ಸ್ವಾಮೀಜಿಗಳು ಮೀಸಲಾತಿ ಹೋರಾಟಗಳಿಗೆ ಇಳಿದಿದ್ದಾರೆ.

ಯಾವ ಆಹಾರ ತಿನ್ನಬೇಕು, ಯಾರನ್ನು ಪ್ರೀತಿಸಬೇಕು ಎಂಬುದನ್ನು ಕಾನೂನುಗಳ ಮೂಲಕವೇ ನಿಯಂತ್ರಿಸಲು ಹೊರಟಿರುವಂತಹ ಈ ಆತಂಕಕಾರಿ ದಿನಗಳಲ್ಲಿ ಗಟ್ಟಿಯಾಗಿದನಿಯೆತ್ತಬಲ್ಲಂತಹ ಪ್ರೊ| ಬಿ. ಕೃಷ್ಣಪ್ಪ ಇಂದು ಹೆಚ್ಚು ಅಗತ್ಯವಾಗಿದ್ದರು.

ಇದನ್ನೂ ಓದಿ:ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸರಳ ಸಂಪನ್ನ

Advertisement

ವಿಶ್ವವಿದ್ಯಾಲಯಗಳಲ್ಲಿರುವ ಪ್ರೊ| ಕೃಷ್ಣಪ್ಪ, ಜಗಜೀವನ್‌ರಾಂ, ಬಸವಣ್ಣ, ಅಂಬೇಡ್ಕರ್‌ ರಂತಹ ಅಧ್ಯಯನ ಪೀಠಗಳು ಕ್ಯಾಂಪಸ್‌ ನಿಂದ ಹೊರಬಂದು ಸಮಾಜದಲ್ಲಿ ಹಲವು ವಿಧದ ಶೋಷಣೆಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ವಿವಿಯ ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ ಮಾತನಾಡಿ, ಪ್ರೊ| ಬಿ. ಕೃಷ್ಣಪ್ಪ ಅವರು ಹರಿಹರ, ಚಿತ್ರದುರ್ಗಗಳಲ್ಲಿ ನಡೆದ ಚಳವಳಿಗಳ ವೇದಿಕೆಯಿಂದಲೇ ದಲಿತರಿಗೆ ದೇವಾಲಯಗಳ ಬದಲಿಗೆ ಸಂಸತ್ತು, ಶಾಸನಸಭೆಗಳಿಗೆ ಪ್ರವೇಶಕ್ಕೆ ಕರೆ ಕೊಟ್ಟಿದ್ದನ್ನು ನಾನು ಸ್ವತಃ ನೋಡಿದ್ದೇನೆ.ಶಿಕ್ಷಿತರಲ್ಲೇ ಹೆಚ್ಚಿನ ಮೌಡ್ಯಆಚರಣೆ, ದುರಾಸೆಯ ಪ್ರವೃತ್ತಿಗಳು,ಅಸಮಾನತೆಯಮನೋಭಾವನೆಗಳು ಇರುವ ಈ ಕಾಲದಲ್ಲಿಕೃಷ್ಣಪ್ಪ ಅವರಂತಹ ಹೋರಾಟಗಾರರ  ಅವಶ್ಯಕತೆಯಿದೆ. ಹೀಗಾಗಿಯೇ ಅವರನ್ನು ನಾವು ಕರ್ನಾಟಕದ ಅಂಬೇಡ್ಕರ್‌ಎಂದು ಹೆಮ್ಮೆಯಿಂದ ಕರೆಯುತ್ತೇವೆ ಎಂದರು. ವಿವಿಯ ಪರೀûಾಂಗ ಕುಲಸಚಿ ಪ್ರೊ| ಪಿ. ಕಣ್ಣನ್‌, ಪ್ರೊ| ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿ ವಿಭಾಗದಪ್ರೊ| ಪ್ರಶಾಂತ್‌ನಾಯ್ಕ, ಡೊಮಿನಿಕ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next