Advertisement

ಮೀಸಲಾತಿ ವಿವಾದ: ಸೂಕ್ತ ಕ್ರಮಕ್ಕೆ ಬಹುಜನ ವಿದ್ಯಾರ್ಥಿ ಸಂಘ ಒತ್ತಾಯ

12:15 PM Feb 24, 2017 | |

ಮಡಿಕೇರಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಬಹುಜನ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕರಾದ ಸಿ.ಜೆ. ಮೋಹನ್‌ ಮೌರ್ಯ, ಕಳೆದ 68 ವರ್ಷಗಳ ಕಾಲ ಆಡಳಿತ ನಡೆಸಿದ ಸರಕಾರಗಳು ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಮಾಡಿವೆ ಎಂದು ಆರೋಪಿಸಿದರು.
 
ರಾಜ್ಯ ಸರಕಾರ ಸುಪ್ರೀಂಕೋರ್ಟ್‌ ಮುಂದೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಅಗತ್ಯ ಸಾûಾÂಧಾರಗಳನ್ನು ಹಾಜರುಪಡಿಸಬೇಕು, ಸುಪ್ರೀಂಕೋರ್ಟ್‌ ಆದೇಶದಲ್ಲಿ ಹೇಳಿದ ನ್ಯೂನತೆಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಸರಕಾರ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಹೊಸ ಕಾನೂನನ್ನು ಈ ವರ್ಷದ ಬಜೆಟ್‌ ಅಧಿವೇಶನದಲ್ಲಿ ಮಂಡಿಸಿ ಪಾಸು ಮಾಡಬೇಕು, ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಸಂವಿಧಾನದ 117 ನೇ ತಿದ್ದುಯಪಡಿ ವಿಧೇಯಕವನ್ನು ಈ ವರ್ಷದ ಬಜೆಟ್‌ ಅಧಿವೇಶನದಲ್ಲಿ ಅಂಗೀಕರಿಸಿ ಆದೇಶ ಹೊರಡಿಸಬೇಕು ಮತ್ತು ಮೀಸಲಾತಿಯನ್ನು ಸಂರಕ್ಷಿಸಲು ಮೀಸಲಾತಿ ವಿಧೇಯಕಗಳನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಬೇಕೆಂದು ಮೋಹನ್‌ ಮೌರ್ಯ ಒತ್ತಾಯಿಸಿದರು.    
 
ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಪ್ರಾತಿನಿಧ್ಯ ನೀಡುವುದು ಪ್ರಜಾಪ್ರಭುತ್ವದ ಮೂಲತತ್ವ. ಸಾವಿರಾರು ವರ್ಷಗಳಿಂದ ಸಾಮಾಜಿಕ ಶೈಕ್ಷಣಿಕ, ಅಸಮಾನತೆಗೆ ತುತ್ತಾಗಿರುವ ಸಮುದಾಯಗಳಿಗೆ ಎಲ್ಲ ಹಂತದಲ್ಲೂ ಸಮಾನ ಪ್ರಾತಿನಿಧ್ಯ ಒದಗಿಸಿಕೊಡುವುದೇ ಮೀಸಲಾತಿಯ ಉದ್ದೇಶ ಮತ್ತು ಸಂವಿಧಾನದ ಆಶಯ. ಆದರೆ ಇಂತಹ ಅನ್ಯಾಯ, ಅಸಮಾನತೆಯನ್ನು ಸರಿಪಡಿಸಬೇಕಾಗಿರುವ ಸಂದರ್ಭಗಳಲ್ಲಿ 2017ರಂದು ಫೆ. 9ರಂದು ಸರ್ವೋಚ್ಚ ನ್ಯಾಯಾಲಯ ಎಸ್‌ಸಿಗಳಿಗೆ ಶೇ.15 ಮತ್ತು ಎಸ್‌ಟಿಗಳಿಗೆ ಶೇ.3ರಷ್ಟು ಭಡ್ತಿಯಲ್ಲಿ ಮೀಸಲಾತಿ ನೀಡುವ ಕರ್ನಾಟಕ ರಾಜ್ಯ ಸರಕಾರದ 2012 ರ ಆದೇಶವನ್ನು ರದ್ದುಪಡಿಸಿದೆ. 

ಎಸ್‌ಸಿ, ಎಸ್‌ಟಿ ವರ್ಗಗಳ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆಗೆ ಧಕ್ಕೆಯಾಗು ವುದಿಲ್ಲ, ಅವರು ಹಿಂದುಳಿದಿದ್ದಾರೆ ಮತ್ತು ಉನ್ನತ ಹುದ್ದೆಗಳಲ್ಲಿ ಅವರ ಪ್ರಾತಿನಿಧ್ಯದ ಕೊರತೆ ಇದೆ ಎಂಬ ಅಂಶಗಳನ್ನು ಸಾಬೀತುಪಡಿಸಲು ರಾಜ್ಯ ಸರಕಾರ ಯಾವ ಸಾûಾÂಧಾರಗಳನ್ನೂ ಹಾಜರುಪಡಿಸಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಇದರ ಪರಿಣಾಮವಾಗಿ 2002 ರಿಂದಲೂ ಮುಂಭಡ್ತಿ ಪಡೆದಿರುವ 36 ವಿವಿಧ ಇಲಾಖೆಗಳ ಸುಮಾರು 10 ಸಾವಿರ ಎಸ್‌ಸಿ, ಎಸ್‌ಟಿ ವರ್ಗಗಳ ನೌಕರರು, ಅಧಿಕಾರಿಗಳು ಹಿಂಭಡ್ತಿ ಪಡೆಯಲಿದ್ದಾರೆ.  

ಸಾಮಾಜಿಕ ನ್ಯಾಯ ಮತ್ತು ಸಮಾನ ಪ್ರಾತಿನಿಧ್ಯ ತತ್ವಗಳಿಗೆ ಈ ತೀರ್ಪು ಧ‌ಕ್ಕೆ ತರುವ ಮೂಲಕ ಈ ಸಮುದಾಯಗಳ ಆತ್ಮವಿಶ್ವಾಸ ಮತ್ತು ಭರವಸೆಗಳನ್ನೇ ನಾಶಮಾಡುವ ಸಾಧ್ಯತೆಗಳಿದೆ ಎಂದು ಮೋಹನ್‌ ಮೌರ್ಯ ಆರೋಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next