Advertisement

14ರವರೆಗೆ ಮನೆಯಲ್ಲಿರಲು ಮನವಿ

04:45 PM Apr 02, 2020 | Suhan S |

ಬಸವಕಲ್ಯಾಣ: ಕೋವಿಡ್ 19 ದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಬುಧವಾರ ಶಾಸಕ ಬಿ.ನಾರಾಯಣರಾವ್‌ ನಗರದ ವಿವಿಧ ವಾರ್ಡ್‌ಗಳಲ್ಲಿರುವ ಜನರಿಗೆ ಆಹಾರ ಧಾನ್ಯದ ಜತೆಗೆ ಕಿರಾಣಿ ಸಾಮಗ್ರಿ ವಿತರಿಸಿದರು.

Advertisement

ಕೊರೊನಾ ಸೋಂಕು ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‌ಡೌನ್‌ ಮಾಡಿದ್ದು, ಇದರಿಂದ ಕಾಯಕ ಮಾಡಿ ಹೊಟ್ಟೆ ತುಂಬಿಕೊಳ್ಳುವ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಹೀಗಾಗಿ ಅವರಿಗೆ ನೆರವಾಗಲು ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ ಎಂದು ಅವರು ಪ್ರತಿಯೊಬ್ಬರು ಮನೆಯಲ್ಲಿರಬೇಕು ಮತ್ತು ಕೆಲಸದ ನಿಮಿತ್ತ ಹೊರಗಡೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಶಾಸಕ ಬಿ.ನಾರಾಯಣರಾವ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next