Advertisement

ಬಸ್‌ ನಿಲ್ದಾಣದಲ್ಲಿ ಪಾಸ್‌ ಒದಗಿಸಲು ಆಗ್ರಹಿಸಿ ಮನವಿ

12:18 PM Nov 28, 2019 | Team Udayavani |

ಅಮೀನಗಡ: ಪಟ್ಟಣದ ಬಸ್‌ ನಿಲ್ದಾಣದಲ್ಲಿ ಬಸ್‌ ಪಾಸ್‌ ನೀಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕ ಎಸ್‌.ಸಿ.ಆಡಿನ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸಂಜಯ ಐಹೊಳ್ಳಿ ಮಾತನಾಡಿ, ರಾಜ್ಯ ಹೆದ್ದಾರಿಗೆ ಹೊಂದಿ  ಕೊಂಡಿರುವ ಪಟ್ಟಣದಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ಬಸ್‌ ಮೂಲಕ ಸಂಚಾರ ಮಾಡುತ್ತಾರೆ. ಪಟ್ಟಣದ ಬಸ್‌ ನಿಲ್ದಾಣದಲ್ಲಿ ಬಸ್‌ ಪಾಸ್‌ ಪೂರೈಕೆ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಬಸ್‌ ಪಾಸ್‌ ವಿತರಣೆ ಮಾಡುವ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಜುನಾಥ ಭಜಂತ್ರಿ ಮಾತನಾಡಿ, ಅಮೀನಗಡ ಪಟ್ಟಣವೂ ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ. ಪಟ್ಟಣದಲ್ಲಿ ಬಸ್‌ ಪಾಸ್‌ ವಿತರಣೆ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಹುನಗುಂದ ಪಟ್ಟಣಕ್ಕೆ ಹೋಗಿ ಬಸ್‌ ಪಾಸ್‌ ಗಮನಹರಿಸುವಂತೆ ಆಗ್ರಹಿಸಿದರು.ಜಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷಚಂದ್ರು ಹಳ್ಳಿ, ಶ್ರೀಧರ ಭಜಂತ್ರಿ, ಹನಮಂತ ಕಡ್ಡಿಪುಡಿ, ಹುಲ್ಲಪ್ಪ ಭಜಂತ್ರಿ, ಸುನೀಲ ಪವಾರ್‌, ರಾಘು ಯರಗೇರಿ, ಮಲ್ಲು ಹೂಗಾರ, ಅಶೋಕ ನರಿ, ಬಸು ಕುಂಬಾರ, ನಾಗೇಶ ಹೂಲಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next