Advertisement

ಬಂಗಾರ ಪಲ್ಕೆ ಟ್ರಾಕ್ಟರ್ ಪಲ್ಟಿಯಾಗಿ ಮೃತಪಟ್ಟ ಅಪರಿಚಿತ ಕಾರ್ಮಿಕನ ಗುರುತು ಪತ್ತೆಗೆ ಮನವಿ

10:08 PM Dec 08, 2022 | Team Udayavani |

ಬೆಳ್ತಂಗಡಿ: ಸಂಸೆ ಗಡಿಯಿಂದ ಮಲವಂತಿಗೆ ಬಂಗಾರಪಲ್ಕೆ ಕಡೆಗೆ ಟ್ರಾಕ್ಟರ್ ನಲ್ಲಿ ಕಾಮಗಾರಿ ನಿಮಿತ್ತ ಕಬ್ಬಿಣ ಸಾಗಿಸುತ್ತಿದ್ದ ವೇಳೆ ಅಬ್ಬಿ ಎಂಬಲ್ಲಿ ಟ್ರಾಕ್ಟರ್ ಪಲ್ಟಿಯಾಗಿತ್ತು.

Advertisement

ಘಟನೆ ವೇಳೆ ಪಾದಾಚಾರಿ ಲೋಕೇಶ್ (32) ಎಂಬಾತ ತಲೆ, ಮೈಕೈಗೆ ತೀವ್ರ ಗಾಯಗೊಂಡು ಮೃತಪಟ್ಟಿದ್ದರು.

ಮೃತಪಟ್ಟ ಲೋಕೇಶ್ ಮಂಡ್ಯ ಜಿಲ್ಲೆಯವರೆಂದು ತಿಳಿದು ಬಂದಿದ್ದು, ಇವರ ಕುರಿತು ಮಾಹಿತಿ ಇದ್ದಲ್ಲಿ ಸಂಬಂಧಿಕರು ತಕ್ಷಣ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ. 08256-234100 ಗೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next