Advertisement

ರಾಯಣ್ಣ, ಶಿವಾಜಿ ಪ್ರತಿಮೆ ಹಾನಿಗೆ ಖಂಡನೆ: ಕ್ರಮ ಕೈಗೊಳ್ಳಲು ಮನವಿ

03:05 PM Dec 18, 2021 | Team Udayavani |

ಬೈಲಹೊಂಗಲ: ಬೆಳಗಾವಿಯಲ್ಲಿ ರಾಯಣ್ಣ, ಶಿವಾಜಿ ಪ್ರತಿಮೆ ವಿಕೃತಗೊಳಿಸಿವುದಕ್ಕೆ ಖಂಡಿಸಿ ಬೈಲಹೊಂಗಲದಲ್ಲಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಕ್ರೀಡಾ ಮತ್ತು ಕಲಾವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೋಟಿ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮಾತನಾಡಿ, ರಾಯಣ್ಣ, ಶಿವಾಜಿ ಮಹರಾಜ ಮಹಾನ ದೇಶಪ್ರೇಮಿಗಳು‌. ನಾಡು, ನುಡಿ, ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಧೀಮಂತ ನಾಯಕರು. ಅವರಿಬ್ಬರು ಈ ದೇಶದ ಆಸ್ತಿಯಾಗಿದ್ದಾರೆ. ಅವರ ಹೆಸರಿನಲ್ಲಿ ರಾಜಕಾರಣ ಸಲ್ಲದು. ಈ ಇಬ್ಬರು ಮಹನೀಯರ ಪ್ರತಿಮೆ ವಿಕೃತಗೊಳಿಸಿರುವುದು ಅತ್ಯಂತ ಖಂಡನೀಯ. ಸರ್ಕಾರ ಕೂಡಲೇ‌ ಮದ್ಯ ಪ್ರವೇಶಿಸಿ ಸಮಾಜದಲ್ಲಿ ಭಾಷಾ ಸೌಹಾರ್ದತೆ ಮೆರೆಯಬೇಕು. ಕಿಡಗೇಡಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕಾನೂನು ಕ್ರಮ ಕೈಕೊಳ್ಳಬೇಕು ಎಂದರು. ರಾಯಣ್ಣ, ಶಿವಾಜಿ ಮಹರಾಜರ ಅಭಿಮಾನಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next