Advertisement

ಕಾಡಿನ ಬೆಂಕಿ ನಂದಿಸುವವರ ನೆರವಿಗೆ ಮನವಿ

06:56 AM Feb 27, 2019 | Team Udayavani |

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚು ನಂದಿಸಲು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಅವರ ನೆರವಿಗೆ ಧಾವಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

Advertisement

ಇದಕ್ಕಾಗಿ ಮೈಸೂರು ಮೃಗಾಲಯದಲ್ಲಿ ಕೌಂಟರ್‌ ತೆರೆಯಲಾಗಿದ್ದು, 5 ಲೀಟರ್‌ ನೀರಿನ ಕ್ಯಾನುಗಳು, ಸಿದ್ಧಪಡಿಸಿ ಒಬ್ಬರಿಗೆ ಒಂದರಂತೆ ಪ್ಯಾಕ್‌ ಮಾಡಲಾದ ಹೆಚ್ಚು ಖಾರವಿಲ್ಲದ ಊಟ, ಕಡಿಮೆ ತೂಕವುಳ್ಳ ಟಾರ್ಚುಗಳು, ಸುಟ್ಟ ಗಾಯಗಳಿಗೆ ಹಚ್ಚುವ ಬರ್ನಲ್‌ ಕ್ರೀಮ್‌, ಬಾಳೆಹಣ್ಣು , ಮೂಸಂಬಿ, ಸೇಬು, ಕಿತ್ತಳೆ, ದ್ರಾಕ್ಷಿ ಮೊದಲಾದ ಕಾಡಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತಹ ಹಣ್ಣುಗಳು, ಗ್ಲುಕೋಸ್‌ ಹಾಗೂ ಓಆರ್‌ಎಸ್‌ ಲಿಕ್ವಿಡ್‌ಗಳನ್ನು ನೀಡಬಹುದಾಗಿದೆ. 

ಈ ಸಾಮಗ್ರಿಗಳನ್ನು ಮೈಸೂರು ಮೃಗಾಲಯದಲ್ಲಿ ತೆರೆಯಲಾಗಿರುವ ಕೌಂಟರ್‌ನಲ್ಲಿ ವಲಯ ಅರಣ್ಯಾಧಿಕಾರಿ ಕೆ.ವಿ.ಸತೀಶ್‌ ಅವರಿಗೆ ತಲುಪಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.9686668867 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next