Advertisement

ಕಿಡ್ನಾಪ್‌ ಆಗಿದ್ದ ಬೇಕರಿ ಮಾಲೀಕಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಮನವಿ

03:10 PM Apr 21, 2022 | Shwetha M |

ಇಂಡಿ: ಇತ್ತೀಚೆಗೆ ಕಿಡ್ನಾಪ್‌ ಆಗಿದ್ದ ಪಟ್ಟಣದ ಅರ್ಬುದಾ ಬೇಕರಿ ಮಾಲೀಕ ಮಾಪಸಿಂಗ್‌ ಪರಮಾರ್‌ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಆಲ್‌ ಇಂಡಿಯಾ ಬಂಜಾರಾ ಸೇವಾ ಸಂಘದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಂಘದ ಅಧ್ಯಕ್ಷ ಸಂಜೀವ ಚವ್ಹಾಣ, ವಿಜಯ್‌ ರಾಠೊಡ ಮತ್ತಿತರರು ಮಾತನಾಡಿ, ಎರಡು ತಿಂಗಳ ಹಿಂದೆ ಸಿನಿಮೀಯ ಶೈಲಿಯಲ್ಲಿ ಬೇಕರಿ ಮಾಲೀಕನನ್ನು ಕಿಡ್ನಾಪ್‌ ಮಾಡಲಾಗಿತ್ತು. ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕೇಸ್‌ ದಾಖಲಿಸಿದ್ದರು. ಆದರೆ ಆರೋಪಿಗಳು ಬೇಲ್‌ ಮೇಲೆ ಹೊರಗಡೆ ಬಂದಿದ್ದು ಮತ್ತೆ ಬೇಕರಿ ಹತ್ತಿರ ಅಡ್ಡಾಡುತಿದ್ದಾರೆ. ಹೀಗಾಗಿ ಬೇಕರಿ ಮಾಲೀಕನ ಪ್ರಾಣಕ್ಕೆ ಅಪಾಯವಿದೆ. ಕೂಡಲೇ ಪೊಲೀಸ್‌ ಇಲಾಖೆಯವರಿಗೆ ನಿರ್ದೇಶನ ನೀಡಿ ಬೇಕರಿ ಮಾಲೀಕನ ಪ್ರಾಣ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಮೋಹನ್‌ ಲಮಾಣಿ, ಬಾಬು ರಾಠೊಡ, ರಂಗು ಚವ್ಹಾಣ, ಧನರಾಜ ರಾಠೊಡ, ಪಂಡಿತ ರಾಠೊಡ, ವಿಲಾಸ ರಾಠೊಡ, ಅಶೋಕ ಚವ್ಹಾಣ, ಸಂತೋಶ ರಾಠೊಡ, ವಿಲಾಸ ರಾಠೊಡ, ಅವಿನಾಶ ರಾಠೊಡ, ಶಿವಲೀಲಾ ರಾಠೊಡ, ಕವಿತಾ ರಾಠೊಡ, ಶೋಭಾ ಪವಾರ, ರಾಜಶ್ರೀ ಚವ್ಹಾಣ,. ನಿಖೀತಾ ಪವಾರ, ಅಂಕಿತಾ ಪವಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next