Advertisement

ಎನ್‌ಪಿಎಸ್‌ ಜಾರಿಗೆ ಒತ್ತಾಯಿಸಿ ಮನವಿ

01:10 PM Dec 25, 2019 | Team Udayavani |

ಹಾವೇರಿ: ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಎನ್‌ಪಿಎಸ್‌ ಯೋಜನೆಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಘಟಕದ ನೌಕರರು ಇತ್ತೀಚೆಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ಜಿ. ಮಾತನಾಡಿ, ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ 2006ಕ್ಕೂ ಪೂರ್ವದಲ್ಲಿ ನೇಮಕಗೊಂಡ ನಂತರ ಅನುದಾನಕ್ಕೆ ಒಳಪಟ್ಟ 2006ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಯಾವೊಬ್ಬ ನೌಕರರಿಗೂ ಯಾವುದೇ ಪಿಂಚಣಿ (ಎನ್‌ಪಿಎಸ್‌ ಮತ್ತು ಒಪಿಎಸ್‌) ಎರಡು ಸೌಲಭ್ಯಗಳು ದೊರೆಯದೆ ಕೊನೆಯ ತಿಂಗಳ ಸಂಬಳ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗುತ್ತಿದ್ದಾರೆ ಎಂದರು. ಈಗಾಗಲೇ ರಾಜ್ಯದಲ್ಲಿ ಸುಮಾರು 2000ಕ್ಕೂ ಅಧಿಕ ಅನುದಾನಿತ ನೌಕರರು ಕೊನೆಯ ಸಂಬಳ ಪಡೆದು ನಿವೃತ್ತಿಯಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ದೊರೆಯುತ್ತಿಲ್ಲ. ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಅವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರಕಿಲ್ಲ. ನಿವೃತ್ತಿ ನೌಕರರ ಬದುಕು ಕಷ್ಟಕರವಾಗಿದೆ ಎಂದರು.ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು ಮತ್ತು ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಸರ್ವೋತ್ಛ ನ್ಯಾಯಾಲಯವೇ ತೀರ್ಪು ನೀಡಿದ್ದರೂ ಸರ್ಕಾರ ಮಾತ್ರ ಪಿಂಚಣಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸುಮಾರು 40ಸಾವಿರಕ್ಕೂ ಹೆಚ್ಚು ಪಿಂಚಣಿ ವಂಚಿತ ನೌಕರರು ಇದ್ದು, ಅವರ ಕುಂಟುಂಬಗಳು ಸಹ ಬೀದಿಗೆ ಬಂದಿವೆ. ಸಂಬಳ ನೀಡುವ ಸರ್ಕಾರವೇ ಪಿಂಚಣಿ ನೀಡಬೇಕು. ನೂತನ ಪಿಂಚಣಿ ಯೋಜನೆಯ ಕಾಯ್ದೆಗೆ ತಿದ್ದುಪಡಿ ಮಾಡಿ ನೌಕರರ ಪಾಲಿನ ವಂತಿಗೆಗೆ ಸರ್ಕಾರ ನೀಡಬೇಕು ಒತ್ತಾಯಿಸಿದರು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಜ.10ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿ.ಜಿ. ಕೊರಗ, ಎಂ.ಎಸ್‌. ಬತ್ತದ, ಎಫ್‌.ಎಚ್‌. ಕೊರವರ, ಎಸ್‌.ಸಿ. ಮರಳಿಹಳ್ಳಿ, ಯು.ಎಸ್‌. ಪಾಟೀಲ, ಎ.ಎ. ಮುಲ್ಲಾ, ಜಿ.ಎಸ್‌. ಹತ್ತಿಮತ್ತೂರ, ಆರ್‌.ಎಂ. ಬಳ್ಳಾರಿ, ಎನ್‌.ಎಸ್‌. ಕಮತರ, ಎಸ್‌.ಬಿ. ಗಾಣಿಗೇರ, ಜಿ.ಬಿ. ರಜಪುತ, ಮಾಲತೇಶರಿತ್ತಿ ಸೇರಿದಂತೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next