Advertisement

ಕೋಣಾರ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ

03:51 PM Nov 05, 2019 | Team Udayavani |

 

Advertisement

ಭಟ್ಕಳ: ಕೊಣಾರ ಗ್ರಾಪಂ ವ್ಯಾಪ್ತಿಯ ಜನ ರಸ್ತೆ ಸೌಲಭ್ಯದಿಂದ ವಂಚಿತರಾದ ಹಿನ್ನೆಲೆಯಲ್ಲಿ ಶಾಸಕ ಸುನಿಲ್‌ ನಾಯ್ಕರಿಗೆ ಮನವಿ ಸಲ್ಲಿಸಿದ್ದರು.

ಕೊಣಾರ ಗ್ರಾಪಂ ವ್ಯಾಪ್ತಿಯ ಗಾಳಿಕಟ್ಟಾ-ಕಾನ್ಕೊಡ್ಲು ನಿವಾಸಿಗಳು ಹಲವಾರು ವರ್ಷಗಳಿಂದ ರಸ್ತೆ ಸೌಲಭ್ಯ ಒದಗಿಸಿ ಕೊಡುವಂತೆ ಹಲವಾರು ಬಾರಿ ಗ್ರಾಪಂ, ತಾಪಂ ಹಾಗೂ ಜಿಪಂಗಳ ಗಮನಕ್ಕೆ ತಂದರೂ ಯಾವುದೇ ಪ್ರಯೊಜನವಾಗಿಲ್ಲ ಆದ್ದರಿಂದ ಅಂತಿಮವಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.

ಶಾಸಕ ಸುನೀಲ್‌ ನಾಯ್ಕ ಸರಕಾರದ ಯೋಜನೆಯಡಿ ರಸ್ತೆಗೆ ಹಣ ಮಂಜೂರಿ ಮಾಡಿಸುವ ಭರವಸೆ ನೀಡಿದರು. ಸ್ಥಳೀಯರಾದ ಚೇತನ್‌ ನಾಯ್ಕ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಗುರು ಪ್ರಸಾದ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next