Advertisement

ಹುಬ್ಬಳ್ಳಿಯಿಂದ ಶಿರಡಿಗೆ ವಿಮಾನಯಾನ: ಮನವಿ

11:50 AM Dec 12, 2019 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಕಿಶನ್‌ಗಡ ಹಾಗೂ ಶಿರಡಿಗೆ ವಿಮಾನಯಾನ ಸೇವೆ ಆರಂಭಿಸಬೇಕೆಂದು ಕೋರಿ ಆಲ್‌ ಇಂಡಿಯಾ ಜೈನ್‌ ಯುತ್‌ ಫೆಡರೇಶನ್‌ ವತಿಯಿಂದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಕಿಶನ್‌ಗಡಕ್ಕೆ ವಿಮಾನ ಸೇವೆ ಒದಗಿಸಿದರೆ ಪುಷ್ಕರ್‌ ಹಾಗೂ ಅಜ್ಮೇರ್ ಗೆ ತೆರಳುವ ಯಾತ್ರಾರ್ಥಿಗಳಿಗಾಗಿ ಅನುಕೂಲತೆ ಕಲ್ಪಿಸಲು ಇದರಿಂದ ಅನುಕೂಲವಾಗುತ್ತದೆ. ಇಲ್ಲಿಂದ ಖ್ವಾಜಾ ಮೊಯಿನುದ್ದಿನ್‌ ಚಿಸ್ತಿ ದರ್ಗಾಕ್ಕೆ, ಗುರುಗೋವಿಂದ ಸಿಂಗ್‌ಜಿ ಗುರುದ್ವಾರಕ್ಕೆ ತೆರಳಲು ಕೂಡ ಅನುಕೂಲವಾಗುತ್ತದೆ. ಪ್ರಸ್ತುತ ಕಿಶನ್‌ಗಡಕ್ಕೆ ತೆರಳಲು 2-3 ದಿನ ರೈಲಿನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಹಿರಿಯ ನಾಗರಿಕರ ಅನುಕೂಲತೆಗಾಗಿ ವಿಮಾನ ಸೇವೆ ಆರಂಭಿಸುವುದು ಅಗತ್ಯವಾಗಿದೆ. ಉತ್ತರ ಕರ್ನಾಟಕದಿಂದ ಸಾಕಷ್ಟು ಜನರು ಶಿರಡಿ ಸಾಯಿಬಾಬಾ ಮಂದಿರಕ್ಕೆ ಯಾತ್ರೆಗೆ ಹೋಗುತ್ತಾರೆ. ಹಿರಿಯ ನಾಗರಿಕರ ಅನುಕೂಲತೆಗಾಗಿ ಬೆಂಗಳೂರುಹುಬ್ಬಳ್ಳಿಶಿರಡಿಗೆ ವಿಮಾನ ಸೇವೆ ಆರಂಭಿಸಬೇಕು ಎಂದು ಕೋರಿದರು. ಫೆಡರೇಶನ್‌ ಅಧ್ಯಕ್ಷ ಮಹೇಂದ್ರ ಸಿಂಘಿ, ಪಾರಸಮಲ್‌ಜಿ ಭನ್ಸಾಲಿ, ಮಹೇಂದ್ರ ಪಾಲ್ಗೊತಾ, ಅಮ್ರವ್‌ ಬೈದ್‌, ರಮೇಶ ಚೋಪ್ರಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next