Advertisement
ಜಿಲ್ಲಾ ಸಂಚಾಲಕ ಶಿವಾನಿ ಬನವಾಸಿ, ರಾಮಚಂದ್ರ ಇಳಸೂರು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ಮಾಡಿದ ಕರಾದಸಂಸ, ದಲಿತ ಜನಾಂಗದ ಯಾವುದೇ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸ ನಿರಾಕರಿಸಬಾರದು ಎಂಬ ಪ್ರಮುಖ ಬೇಡಿಕೆ ಇಟ್ಟಿತು. ಹಾಸ್ಟೆಲ್ ಮತ್ತು ಶಿಕ್ಷಣಕ್ಕೆ ಅರ್ಜಿ ಹಾಕಿದ ಯಾವುದೇ ವಿದ್ಯಾರ್ಥಿಗೆ ವಸತಿ ಮತ್ತು ಶಿಕ್ಷಣ ನಿರಾಕರಿಸಬೇಡಿ ಎಂದ ದಲಿತ ಮುಖಂಡರು, ಭೂಮಿ ಒಡೆತನಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಭೂಮಿ ನೀಡಬೇಕು. ದಲಿತರಿಗೆ ಇರುವ ಯೋಜನೆಗಳ ಜಾರಿಗೆ ಏಕಗವಾಕ್ಷಿ ನೀತಿ ಜಾರಿಗೆ ತರಬೇಕು. ಆಯಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದ ಸಮಿತಿ ಇದ್ದು, ಇದು ದಲಿತರ ಯೋಜನೆ ಜಾರಿಗೆ ಅಡ್ಡಿಯಾಗಿದೆ. ಇಂತಹ ಶಾಸಕರ ನೇತೃತ್ವದ ಸಮಿತಿಗಳನ್ನು ರದ್ದು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ಅಡಿ ಬರುವ ಎಲ್ಲ ನಿಗಮ ಮಂಡಳಿಗಳಲ್ಲಿ ದಲಿತರು, ಹಿಂದುಳಿದವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಅಂಥರಿಗೆ ಸಾಲ ಮಂಜೂರು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನು ಸರ್ಕಾರ ಕಾಯಂ ಮಾಡಬೇಕೆಂಬ ಬೇಡಿಕೆಯನ್ನು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮೂಲಕ ಸಲ್ಲಿಸಲಾಯಿತು.
Advertisement
ದಲಿತ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲು ಮನವಿ
05:29 PM Sep 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.