Advertisement

ಬಿಜೆಪಿಯಿಂದ ಕಾಳ ಧನಿಕರ ಪ್ರತಿಕೃತಿ ದಹನ

02:19 PM Nov 09, 2017 | |

ಚಿತ್ತಾಪುರ: ತಾಲೂಕು ಬಿಜೆಪಿ ಮುಖಂಡರು ಕಾರ್ಯಕರ್ತರು ನೋಟು ಬದಲಾವಣೆ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಿದರು.

Advertisement

ಬಿಜೆಪಿ ಕಚೇರಿಯಿಂದ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಮೂಲಕ ಕೆ.ಜಿ.ಬಿ ಬ್ಯಾಂಕ್‌ ಎದುರಿನ ಚೌಕ್‌ಗೆ ತೆರಳಿ ಕಾಳ ಧನಿಕರ ಪ್ರತಿಕೃತಿ ದಹನ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಲ್ಲಾ ಕಾರ್ಯದರ್ಶಿ ರವಿ ಬಿರಾದಾರ, ತಾಲೂಕು ಅಧ್ಯಕ್ಚ ಮಲ್ಲಿಕಾರ್ಜುನ ಎಮ್ಮನೋರ್‌ ಮಾತನಾಡಿ, ನೋಟ್‌ ಬದಲಾವಣೆಯಿಂದ ಕಾಂಗ್ರೆಸ್‌ ಮುಖಂಡರಿಗೆ ಹಾಗೂ ಕಾಳಧನ ಸಂಪಾದಿಸಿದವರಿಗೆ ತೊಂದರೆಯಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದು ಹೇಳಿದರು.

ತಾಲೂಕು ಕಾರ್ಯದರ್ಶಿ ನಾಗರಾಜ ಹೂಗಾರ, ಶರಣು ಜ್ಯೋತಿ, ಮಹಿಳಾ ಘಟಕ ಅಧ್ಯಕ್ಷೆ ಅಕ್ಕ ಮಹಾದೇವಿ, ನಗರ ಘಟಕ ಅಧ್ಯಕ್ಷ ಬಸವರಾಜ ಸಂಕನೂರ, ನಗರ ಯುವ ಮೋರ್ಚಾ ಅಧ್ಯಕ್ಷ ರಮೇಶ ಕಾಳನೂರ, ಯುವ ಮೋರ್ಚಾ ಅಧ್ಯಕ್ಷ ಶ್ರೀಶೈಲ ಪಾಟೀಲ್‌ ದಿಗ್ಗಾಂವ, ಪುರಸಭೆ ಸದಸ್ಯರಾದ ಸುರೇಶ ಬೆನಕನಹಳ್ಳಿ, ಧಶರಥ ದೊಡ್ಮನಿ, ಹೀರು ರಾಠೊಡ, ಮುಖಂಡರಾದ ಗೋಪಾಲ ರಾಠೊಡ, ತಮ್ಮಣ್ಣ ಡಿಗ್ಗಿ ಮತ್ತಿತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next