Advertisement

ಮಳೆಗೂ ಮೊದಲೇ ರಿಪೇರಿಯಾದ ಚರಂಡಿ

10:49 PM May 22, 2019 | sudhir |

ಬಸ್ರೂರು: ಸಾಮಾನ್ಯವಾಗಿ ಬಹುತೇಕ ಗ್ರಾ.ಪಂ.ಗಳಲ್ಲಿ ಮಳೆ ಬಂದ ನಂತರವೇ ಚರಂಡಿ ಕಾಮಗಾರಿ ಆರಂಭವಾಗುವುದು. ಆದರೆ ಇದಕ್ಕೆ ಹೊರತಾಗಿ ಬಸ್ರೂರು ಗ್ರಾ.ಪಂ.ನಲ್ಲಿ ವಾರದ ಹಿಂದೆ‌ಯೇ ಚರಂಡಿ ಕಾಮಗಾರಿ ಆರಂಭವಾಗಿದೆ.

Advertisement

ಚರಂಡಿಯಲ್ಲಿ ತುಂಬಿರುವ ಕೊಳಚೆಯನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡುವುದಕ್ಕಾಗಿ ನಡೆದ ಕಾಮಗಾರಿಯ ಮೂಲಕ ಇತರ ಗ್ರಾ.ಪಂ.ಗಳಿಗೂ ಮಾದರಿಯಾಗಿದೆ.

ಸಮಸ್ಯೆ ಇಲ್ಲ
ಮಳೆ ಬಂದ ಅನಂತರ ಮಳೆ ನೀರು ಚರಂಡಿಯೆಲ್ಲ ತುಂಬಿ ನೀರು ಎಲ್ಲೆಂದರಲ್ಲಿ ಹರಿದು ಅವ್ಯವಸ್ಥೆಯಾಗುವುದನ್ನು ತಡೆಯುವ ಸಲುವಾಗಿ ಈಗಲೇ ಬಸ್ರೂರು ಗ್ರಾ.ಪಂ.ನಲ್ಲಿ ಚರಂಡಿಯ ಕೊಳೆಯನ್ನೆಲ್ಲ ತೆಗೆಯುವ ಕೆಲಸ ಮಾಡುತ್ತಿದ್ದೇವೆ. ಮಳೆ ಬರುವ ಮೊದಲೇ ಈ ಕಾಮಗಾರಿ ನಡೆದರೆ ಅನಂತರದ ಸಮಸ್ಯೆ ಕಡಿಮೆಯಾಗುತ್ತದೆ.
-ನಾಗರಾಜ ಗಾಣಿಗ ಸಂತೆಕಟ್ಟೆ , ಅಧ್ಯಕ್ಷ , ಗ್ರಾ.ಪಂ. ಬಸ್ರೂರು

Advertisement

Udayavani is now on Telegram. Click here to join our channel and stay updated with the latest news.

Next