Advertisement

ಅಮಾನಿ ಬೈರಸಾಗರ ಕೆರೆ ಕಟ್ಟೆ ರಸ್ತೆ ದುರಸ್ತಿಪಡಿಸಿ

11:59 AM Dec 04, 2019 | Team Udayavani |

ಗುಡಿಬಂಡೆ: ಪಟ್ಟಣದ ಹೊರ ವಲಯದಲ್ಲಿರುವ ಅಮಾನಿ ಬೈರಸಾಗರ ಕೆರೆ ಕಟ್ಟೆಯ ಮೇಲೆ ರಸ್ತೆ ಹದಗೆಟ್ಟಿದ್ದರೂ ಸಹ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫ‌ಲರಾಗಿದ್ದು, ಸವಾರರು ಪ್ರತಿದಿನ ಕಿರಿ ಕಿರಿ ಅನುಭವಿಸುವಂತಾಗಿದೆ.ರಾಷ್ಟ್ರೀಯ ಹೆದ್ದಾರಿ 7 ರಿಂದ ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕವಾಗಿರುವ ರಸ್ತೆ ಇದಾಗಿದ್ದು, ಬೀಚಗಾನಹಳ್ಳಿ ಕ್ರಾಸ್‌ ಮತ್ತು ಪೇರೇಸಂದ್ರ ಕ್ರಾಸ್‌ ನಿಂದ ಗುಡಿಬಂಡೆಗೆ ಆಗಮಿಸಲು ಇದೊಂದೇ ರಸ್ತೆಯಾಗಿರುವುದರಿಂದ ಪ್ರತಿ ದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ.

Advertisement

ತೇಪೆ ಹಾಕುತ್ತಾರೆ: ಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಆದರೆ ಅಧಿಕಾರಿಗಳು ರಸ್ತೆಗೆ ಕೇವಲ ತೇಪೆಗಳನ್ನು ಮಾತ್ರ ಹಾಕುತ್ತಾರೆಯೇ ಹೊರೆತು ಪೂರ್ತಿ ರಸ್ತೆ ದುರಸ್ತಿಗೆ ಮುಂದಾಗುವುದಿಲ್ಲ. ಹಾಕಿರುವ ತೇಪೆಗಳು ತಿಂಗಳು ಕಳೆಯುವಷ್ಟರಲ್ಲಿ ಕಿತ್ತುಹೋಗಿ ಯಥಾಸ್ಥಿತಿ ಗುಂಡಿಗಳು ಬೀಳುವುದು ಸಾಮಾನ್ಯವಾಗಿದೆ.

ಅಪಘಾತಗಳು ಹೆಚ್ಚು: ಅಮಾನಿಬೈರಸಾಗರ ಕೆರೆಯ ಕಟ್ಟೆಯ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಸಂಚರಿಸುವಾಗ ಗುಂಡಿಗಳನ್ನು ತಪ್ಪಿಸಲು ಹೋಗಿ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸಿ ಸಾರ್ವಜನಿಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ ಎಂದರು.

ಕಟ್ಟೆಯ ಮೇಲೆ ತಡೆಗೊಡೆ ಇಲ್ಲ: ಅಮಾನಿ  ಬೈರಸಾಗರ ಕೆರೆ ಏರಿಯ ಮೇಲೆ ತಡೆಗೋಡೆ ಇಲ್ಲದಿರುವುದರಿಂದ ಈ ಹಿಂದೆ ಜಿಎಮ್‌ಎಸ್‌ ಎಂಬ ಖಾಸಗಿ ಬಸ್‌ ಕಟ್ಟೆಯ ಮೇಲಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಕೈ,ಕಾಲು ಮುರಿ  ದುಕೊಂಡು ಅಂಗವಿಕಲರಾಗಿದ್ದಾರೆ. ಆದರೂ ಸಹ ಅಧಿಕಾರಿಗಳು ತಡೆಗೋಡೆ ನಿರ್ಮಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next