Advertisement

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

12:41 AM Jun 18, 2024 | Team Udayavani |

ಚಿತ್ರದುರ್ಗ: ಪುತ್ರನ ಕೊಲೆ ಪ್ರಕರಣದ ಸಂಬಂಧ ರೇಣುಕಾಸ್ವಾಮಿಯ ತಂದೆ ಶಿವನಗೌಡ ಅವರನ್ನು ಪೊಲೀಸರು ಜೂ. 14ರ ಶುಕ್ರವಾರವೇ ಬೆಂಗಳೂರಿಗೆ ಕರೆಸಿಕೊಂಡು ಪುತ್ರನ ಬಗ್ಗೆ ಮಾಹಿತಿ ಪಡೆದುಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅವರ ಹೇಳಿಕೆಯನ್ನು ಆಧರಿಸಿ ಮತ್ತೊಮ್ಮೆ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆತಂದು ಮಹಜರು ನಡೆಸಿದ್ದಾರೆ.

Advertisement

ಪುತ್ರನ ಬಳಿ ಏನೇನಿತ್ತು ಎನ್ನುವ ಬಗ್ಗೆ ವಿಚಾರಿಸಿದಾಗ ಬಂಗಾರದ ಸರ, ಉಂಗುರ ಹಾಗೂ ಬೆಳ್ಳಿಯ ಕರಡಿಗೆ (ಇಷ್ಟಲಿಂಗ ಇಡುವ ಸಾಧನ) ಇತ್ತು ಎಂದಿದ್ದಾರೆ. ಈಗಾಗಲೇ ಎ 4 ಆರೋಪಿ ರಾಘವೇಂದ್ರನನ್ನು ಚಿತ್ರದುರ್ಗಕ್ಕೆ ಕರೆತಂದು ಮಹಜರು ನಡೆಸಿದ್ದರೂ ಶಿವನಗೌಡರು ನೀಡಿದ ಆಭರಣಗಳ ಮಾಹಿತಿಯ ಜಾಡು ಹಿಡಿದು ಮತ್ತೆ ಚಿತ್ರದುರ್ಗಕ್ಕೆ ಬಂದಿದ್ದು, ರಾಘವೇಂದ್ರನ ಮನೆಯಲ್ಲಿ ತಪಾಸಣೆ ಮಾಡಿದಾಗ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿವೆ ಎನ್ನಲಾಗುತ್ತಿದೆ.

ಶಿವನಗೌಡರು ಪೊಲೀಸರ ಬಳಿ, ನಿಮ್ಮ ಭುಜದ ಮೇಲಿರುವ ಸ್ಟಾರ್‌ ಹಾಗೂ ಕುರ್ಚಿಗೆ ಗೌರವ ಕೊಡುತ್ತೇನೆ ಸ್ವಾಮಿ, ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ. ಪೊಲೀಸರು ಧೈರ್ಯವಾಗಿರಿ ಎಂದು ಭರವಸೆ ತುಂಬಿ ಕಳುಹಿಸಿದ್ದಾರೆ.

ರೇಣುಕಸ್ವಾಮಿ ಕೈಲಾಸ ಶಿವಗಣಾರಾಧನೆ
ಕೊಲೆಯಾದ ರೇಣುಕಾಸ್ವಾಮಿ ಕೈಲಾಸ ಶಿವಗಣಾರಾಧನೆ ಸೋಮವಾರ ಚಿತ್ರದುರ್ಗದ ವಿಆರ್‌ಎಸ್‌ ಬಡಾವಣೆಯಲ್ಲಿರುವ ನಿವಾಸದಲ್ಲಿ ನಡೆಯಿತು. ನೂರಾರು ಮಂದಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next