Advertisement

RenukaswamyCase: ದರ್ಶನ್‌ ಜತೆಗೆ ಲಿವಿಂಗ್‌ ಟುಗೆದರ್‌:ವಿಚಾರಣೆಯಲ್ಲಿ ಪವಿತ್ರಾಗೌಡ ಹೇಳಿಕೆ

03:30 PM Sep 06, 2024 | Team Udayavani |

ಬೆಂಗಳೂರು: ನಟ ದರ್ಶನ್‌ ಮತ್ತು ಪವಿತ್ರಾಗೌಡ ಸಹಜೀವನ (ಲಿವಿಂಗ್‌ ಟು ಗೆದರ್‌) ನಡೆಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಪ್ರಕರಣದ ವಿಚಾರಣೆಯಲ್ಲಿ ಪವಿತ್ರಾಗೌಡಗೆ ತನಿಖಾಧಿಯೊಬ್ಬರು, ನಿಮಗೂ ದರ್ಶನ್‌ಗೂ ಯಾವ ರೀತಿ ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಪವಿತ್ರಾ ಗೌಡ, ದರ್ಶನ್‌ ಜತೆ ಸುಮಾರು ಆರೇಳು ವರ್ಷಗಳಿಂದ ಸಹ ಜೀವನ ನಡೆಸುತ್ತಿದ್ದೇನೆ. ಸ್ನೇಹಿತರೊಬ್ಬರ ಮೂಲಕ ದರ್ಶನ್‌ ಪರಿಚಯವಾಗಿದ್ದು, ಅಂದಿನಿಂದ ಇಬ್ಬರು ಸಹಜೀವನ ನಡೆಸುತ್ತಿದ್ದೇವೆ ಎಂದಿದ್ದಾರೆ. ಈ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಒಂದು ವೇಳೆ ಆಕೆ ಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ಉಲ್ಟಾ ಹೊಡೆದರೆ, ಅದಕ್ಕೂ ತಮ್ಮ ಬಳಿ ಸಾಕ್ಷ್ಯ ಇವೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌, ಪವಿತ್ರಾಗೌಡ ಮೊಬೈಲ್‌ನಲ್ಲೂ ಕೊಲೆ ರಹಸ್ಯ? ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಪವಿತ್ರಾಗೌಡ ಫೋನ್‌ಗಳ ಸದ್ಯ ರಿಟ್ರೈವ್‌ ಆಗಿಲ್ಲ ಎಂದು ಹೇಳಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್‌ ಸಿಎಫ್ಎಸ್‌ಎಲ್‌ನಲ್ಲಿದ್ದ ಇಬ್ಬರ ಐಫೋನ್‌ ಗಳು ರಿಟ್ರೀವ್‌ ಆಗದೇ ವಾಪಸ್‌ ಬಂದಿವೆ ಎನ್ನಲಾಗಿದೆ. ಸದ್ಯ ಎರಡು ಐಫೋನ್‌ಗಳನ್ನು ಗುಜರಾತ್‌ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್‌ನ ಎಫ್ಎಸ್‌ಎಲ್‌ ವಿವಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ ಬೇಧಿಸಲು ಕಳುಹಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next