Advertisement

Renukaswamy Case: ಜಾಮೀನು ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ

11:28 PM Aug 19, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಹಾಗೂ 7ನೇ ಆರೋಪಿ ಅನುಕುಮಾರ್‌ ಸೆಷನ್ಸ್‌ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

Advertisement

ಪವಿತ್ರಾ ಪರ ಹಿರಿಯ ವಕೀಲೆ ರೇನಿ ಸೆಬಾಸ್ಟಿನ್‌ ಸೋಮವಾರ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ಜಾಮೀನು ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿ ಆ. 22ಕ್ಕೆ ಮೂಂದೂಡಿತು. ಜೈಲು ಸೇರಿ ಸುಮಾರು 75 ದಿನ ಕಳೆದ ಬಳಿಕ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾಳೆ.

ಇನ್ನು 7ನೇ ಆರೋಪಿ ಅನುಕುಮಾರ್‌ ಪರ ವಕೀಲರಾದ ವಕೀಲ ಕೆ. ರಾಮ್‌ ಸಿಂಗ್‌, ಅನುಕುಮಾರ್‌ ಪರ ಜಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅನುಕುಮಾರ್‌ ಬಂಧಿಸುತ್ತಿದ್ದಂತೆ ಅನುಕುಮಾರ್‌ ತಂದೆ ಮೃತಪಟ್ಟಿದ್ದರು. ಕೊಲೆಗೂ ಅನುಕುಮಾರ್‌ಗೂ ಸಂಬಂಧವಿಲ್ಲ. ನಟ ದರ್ಶನ್‌ನನ್ನು ನೋಡುವ ಆಸೆಯಲ್ಲಿ ಅನುಕುಮಾರ್‌ ಚಿತ್ರದುರ್ಗದಿಂದ ಬಂದಿದ್ದಾನೆ. ದಾರಿ ಮಧ್ಯೆ ಅನುಗೆ ರೇಣುಕಾಸ್ವಾಮಿ ಮೆಸೇಜ್‌ ಮಾಡಿರುವ ವಿಚಾರ ಗೊತ್ತಾಗಿದೆ.

ಅನುಕುಮಾರ್‌ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿದ್ದ ಶೆಡ್‌ ಒಳಗೂ ಹೋಗಿಲ್ಲ. ಶವ ಎಸೆಯುವುದಕ್ಕೂ ಆತ ಹೋಗಿಲ್ಲ ಎಂಬ ಪ್ರಮುಖ ಅಂಶಗಳ ಉಲ್ಲೇಖಿಸಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next