Advertisement

Renukaswamy Caseನಾಲ್ವರು ಆರೋಪಿಗಳಿಗೆ ಜೀವಬೆದರಿಕೆ; ತುಮಕೂರು ಜೈಲಿಗೆ ಸ್ಥಳಾಂತರಕ್ಕೆ ಮನವಿ

12:08 AM Jun 23, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ಶನಿವಾರ 24ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದದಲ್ಲಿ ಕೆಲವೊಂದು ಮಹತ್ವದ ವಿಚಾರಗಳನ್ನು ಸರಕಾರಿ ಅಭಿಯೋಜಕರು ಮಂಡಿಸಿದರು.

Advertisement

ದರ್ಶನ್‌ ಸೇರಿ ನಾಲ್ವರು ಆರೋಪಿಗಳ ವಿಚಾರಣೆಯಲ್ಲಿ ಕೆಲವೊಂದು ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ ವಿಶೇಷ ಸರಕಾರಿ ಅಭಿಯೋಜಕರಾದ ಪಿ. ಪ್ರಸನ್ನ ಕುಮಾರ್‌, ದರ್ಶನ್‌ ಹಾಗೂ ಇತರ ಆರೋಪಿಗಳು ಹಾಗೂ ಜೈಲಿನಲ್ಲಿರುವ ದರ್ಶನ್‌ ಅಭಿಮಾನಿಗಳಿಂದ ಚಿತ್ರದುರ್ಗದ ರವಿಶಂಕರ್‌, ಕಾರ್ತಿಕ್‌, ಕೇಶವ ಮೂರ್ತಿ, ನಿಖೀಲ್‌ ನಾಯಕ್‌ಗೆ ಬೆದರಿಕೆ ಇದ್ದು ಅವರನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡುವಂತೆ ಕೋರ್ಟ್‌ಗೆ ಮನವಿ ಮಾಡಿದರು.

ಅದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪಿಸಿ, ಬಂಧಿತರ ವಾದ ಆಲಿಸಿ ತುಮಕೂರು ಜೈಲಿಗೆ ಸ್ಥಳಾಂತರ ಮಾಡುವ ಕುರಿತು ತೀರ್ಮಾನಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ಕೋರ್ಟ್‌, ಸೋಮವಾರ ಈ ನಾಲ್ವರು ಆರೋಪಿಗಳ ವಾದ ಅಥವಾ ಅಭಿಪ್ರಾಯ ಆಲಿಸಿ ಮುಂದಿನ ಸೂಚನೆ ನೀಡುವುದಾಗಿ ಸೂಚಿಸಿ, ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.

ರಿಟ್‌ ಅರ್ಜಿ ಪುರಸ್ಕೃತಗೊಂಡರೆ ಜಾಮೀನು
ಕೋರ್ಟ್‌ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದರ್ಶನ್‌ ಪರ ವಕೀಲ, ಜಾಮೀನು ಅರ್ಜಿಯನ್ನು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸುತ್ತೇವೆ. ಅದಕ್ಕೂ ಮೊದಲು ಅಂತಿಮ ರಿಮ್ಯಾಂಡ್‌ ಅರ್ಜಿ ಸಲ್ಲಿಸಿ ಬಳಿಕ ಜಾಮೀನು ಅರ್ಜಿ ಹಾಕುತ್ತೇವೆ. ಒಂದು ವೇಳೆ ರಿಟ್‌ ಅರ್ಜಿ ಪುರಸೃತಗೊಂಡರೆ ಆರೋಪಿಗಳಿಗೆ ಬಿಡುಗಡೆ ಸಾಧ್ಯತೆಯಿದೆ. ಅದು ಹೈಕೋರ್ಟ್‌ಗೆ ವಿವೇಚನೆಗೆ ಬಿಟ್ಟದ್ದು ಎಂದರು.

ದರ್ಶನ್‌ ಪರ ನಾಗೇಶ್‌ ವಾದ
ದರ್ಶನ್‌ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್‌ ವಾದ ಮಂಡಿಸಲಿದ್ದಾರೆ. ಶನಿವಾರ ಸೆಷನ್ಸ್‌ ಕೋರ್ಟ್‌ನಲ್ಲಿ ವಕೀಲ ನಾಗೇಶ್‌ ಅವರ ಪರವಾಗಿ ವಕೀಲ ರಾಘವೇಂದ್ರ ರೆಡ್ಡಿ ವಕಾಲತ್ತು ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next