Advertisement

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

06:10 PM Jun 15, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ, ಪೊಲೀಸ್‌ ವಿಚಾರಣೆಯಲ್ಲಿದ್ದ ನಟ ದರ್ಶನ್‌ ಗ್ಯಾಂಗ್‌ ನ್ನು ಶನಿವಾರ(ಜೂ.15 ರಂದು) ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದೆ. ದರ್ಶನ್‌ ಸೇರಿ 10 ಮಂದಿಯನ್ನು ಮತ್ತೆ 5 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿದೆ.

Advertisement

ಆರ್ಥಿಕ ಅಪರಾಧಗಳ ವಿಶೇಷ ಕೋರ್ಟಿನಲ್ಲಿ ವಿಚಾರಣೆ ನಡೆಸಲಾಗಿದೆ. ಪೊಲೀಸ್‌ ವಿಚಾರಣೆಯಲ್ಲಿದ್ದ ಆರೋಪಿಗಳನ್ನು ಮತ್ತೆ 9 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

ಆರೋಪಿಗಳು ಏನು ಮಾಡಿದ್ದಾರೆ ಎಂದು ತಿಳಿಸಲಿ. ಎಲ್ಲದಕ್ಕೂ 2ನೇ ಆರೋಪಿ ದರ್ಶನ್‌ ಅವರೇ ಕಾರಣ ಎನ್ನುವುದು ಎಷ್ಟು ಸರಿ? ದ‌ರ್ಶನ್‌ ಪರ ಅನಿಲ್‌ ಬಾಬು ಕೋರ್ಟಿನ ಮುಂದೆ ವಾದ ಮಂಡಿಸಿದ್ದಾರೆ.

ಆರೋಪಿಗಳ ಪೈಕಿ ಮಹಿಳೆ ನೋವು ಅನುಭವಿಸಿದ್ದಾರೆ. ಪವಿತ್ರಾ ಗೌಡ ಅವರನ್ನು 6 ದಿನಗಳ ವಿಚಾರಣೆಗೆ ಒಳಪಡಿಸಲಾಗಿದೆ. ಇದುವರೆಗೂ ನಮಗೆ ರಿಮ್ಯಾಂಡ್‌ ಅರ್ಜಿ ಬಂದಿಲ್ಲ. ಕೋರ್ಟ್‌ ಗೆ ಮಾಹಿತಿ ನೀಡದೆ ಆರೋಪಿಗಳ ಮೊಬೈಲ್‌ ವಶಪಡಿಸಿದ್ದಾರೆ. ಆರೋಪಿಗಳ ಹೇಳಿಕೆ ಹೊರಗೆ ಸೋರಿಕೆಯಾಗುತ್ತಿದೆ ಎಂದು ಪವಿತ್ರಾ ಪರ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ಎ5 ಹಾಗೂ 13 ರೇಣುಕಾಸ್ವಾಮಿ ಅವರಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಾಯಿಸಿದ್ದಾರೆ. ಆ ಡಿವೈಸ್‌ ನ್ನು ನಾವು ವಶಕ್ಕೆ ಪಡೆಯಬೇಕು. ಕೊಲೆ ಮಾಡಿ ಆರೋಪಿ ಮೈಸೂರಿಗೆ ತೆರಳಿದ್ದಾರೆ. ಅಲ್ಲಿನ ಸ್ಥಳ ಮಹಜರು ನಡೆಯಬೇಕು. ಆರೋಪಿಗಳ ಮೊಬೈಲ್ ರಿಟ್ರೈವ್‌ ಮಾಡಬೇಕು. ಹಾಗಾಗಿ ನಮಗೆ ಆರೋಪಿಗಳು ಇನ್ನಷ್ಟು ದಿನ ಕಸ್ಟಡಿಗೆ ಬೇಕೆಂದು ಪೊಲೀಸರ ಪರ ವಕೀಲರು ವಾದ ಮಂಡಿಸಿದ್ದಾರೆ.

Advertisement

ವಾದ – ಪ್ರತಿವಾದ ಆಲಿಸಿದ ಪೊಲೀಸರು ದರ್ಶನ್‌, ಪವಿತ್ರಾ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಮತ್ತೆ 5  ದಿನಗಳ ಕಾಲ (ಜೂ.20 ರವರೆಗೆ) ಪೊಲೀಸ್‌ ಕಸ್ಟಡಿಗೆ ನೀಡಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ ಆದೇಶ ನೀಡಿದೆ.

ಎ1 ಪವಿತ್ರಾ, ಎ2 ದರ್ಶನ್‌, ಎ3 ಪವನ್‌, ಎ4 ರಾಘವೇಂದ್ರ, ಎ5 ನಂದೀಶ, ಎ6 ಜಗದೀಶ್‌(ಜಗ್ಗ), ಎ7 ಅನುಕುಮಾರ್‌, ಎ10 ವಿನಯ್‌, ಎ11 ನಾಗರಾಜ್ ಎ12 ಲಕ್ಷ್ಮಣ, ಎ13 ದೀಪಕ್‌, ಎ14 ಪ್ರದೋಶ್‌, ಎ16 ಕೇಶವಮೂರ್ತಿ ಅವರನ್ನು ಕಸ್ಟಡಿಗೆ ನೀಡಲಾಗಿದೆ.

ಈಗಾಗಲೇ ಈ ಪ್ರಕರಣದಲ್ಲಿ 18 ಜನರನ್ನು ಬಂಧಿಸಲಾಗಿದೆ. ಶುಕ್ರವಾರ ನಾಲ್ವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ದಿನಕಳೆದಂತೆ ಪ್ರಕರಣ ಸಂಬಂಧ ವಿಚಾರಣೆಯಲ್ಲಿ ಆರೋಪಿಗಳು ಒಂದೊಂದೆ ವಿಚಾರವನ್ನು ಬಹಿರಂಗಪಡಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2 ಆಗಿದ್ದಾರೆ.

ಗೆಳತಿ ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್‌ ಹಾಗೂ ಕಾಮೆಂಟ್‌ ಮಾಡುತ್ತಿದ್ದ ಕಾರಣ ರೇಣುಕಾಸ್ವಾಮಿ ಅವರನ್ನು ಅಪಹರಿಸಿ, ಬೆಂಗಳೂರಿನ ಶೆಡ್‌ ವೊಂದರಲ್ಲಿ ಇರಿಸಿ ಹಲ್ಲೆ ಮಾಡಿ, ಹತ್ಯೆಗೈದು ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು. ಇದಾದ ಬಳಿಕ ಇಬ್ಬರು ಠಾಣೆಗೆ ಬಂದು ಈ ಕೊಲೆಯನ್ನು ತಾವು ಹಣಕಾಸಿನ ವಿಚಾರಕ್ಕೆ ಮಾಡಿದ್ದೇವೆ ಎನ್ನುವ ಮಾತುಗಳನ್ನು ಪೊಲೀಸರು ಮುಂದೆ ಹೇಳಿದ್ದರು. ಆದರೆ ಪೊಲೀಸರು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ, ದರ್ಶನ್‌ ಸೂಚನೆಯ ಮೇರೆಗೆ ಕೊಲೆ ಮಾಡಿದ್ದೇವೆ ಎನ್ನುವ ಸತ್ಯಾಂಶವನ್ನು ಬಾಯಿಬಿಟ್ಟಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next