Advertisement

ಕಾಂಪ್ಲೆಕ್ಸ್‌ ನ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದ ಉಳ್ತೂರಿನ ರಮೇಶ್‌ ಅಡಿಗ

09:48 AM Mar 28, 2020 | sudhir |

ತೆಕ್ಕಟ್ಟೆ : ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್‌ ಸೋಂಕು ನಿಯಂತ್ರಣ ದೃಷ್ಟಿಯಿಂದ ದೇಶಾದ್ಯಂತ ಲಾಕ್‌ ಡೌನ್‌ ಮಾರಣಾಂತಿಕ ಕೊರೊನಾ ಅಟ್ಟಹಾಸ ದೇಶದ ಆರ್ಥಿಕತೆ ಹಾಗೂ ಮಧ್ಯಮ ವರ್ಗದವರ ಮೇಲೆ ತೀವ್ರ ತೆರೆನಾದ ಪರಿಣಾಮ ಬೀರಿ ಆತಂಕದಿಂದ ಬದುಕು ನಡೆಸಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ . ಈ ನಡುವೆಯೂ ಕೂಡಾ ಕುಂದಾಪುರ ತಾಲೂಕಿನ ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉಳೂ¤ರು ರಮೇಶ್‌ ಅಡಿಗ ಅವರು ಉಳೂ¤ರು ದೇಗುಲದ ಸಮೀಪದಲ್ಲಿರುವ ತನ್ನ ಕಾಂಪ್ಲೆಕ್ಸ್‌ನಲ್ಲಿರುವ ಎಲ್ಲಾ ಅಂಗಡಿಗಳಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲು ನಿರ್ಧರಿಸಿ ಮಾನವೀಯತೆ ಮೆರೆದಿದ್ದಾರೆ. ಸುಮಾರು ಮೂರು ವಾರಗಳ ಕಾಲ ಅಂಗಡಿ ಮುಚ್ಚಿ ಬಾಡಿಗೆದಾರರು ಕೆಲಸ ಕಾರ್ಯವಿಲ್ಲದೆ ಕುಟುಂಬ ನಿರ್ವಹಣೆಯ ಜತೆಗೆ ಅಂಗಡಿಯ ಬಾಡಿಗೆ ಹೇಗೆ ಕಟ್ಟುವುದು ಎನ್ನುವ ಆತಂಕದಲ್ಲಿದ್ದ ಗ್ರಾಮೀಣ ಭಾಗದ ಅಂಗಡಿ ಬಾಡಿಗೆದಾರರು ಕಾಂಪ್ಲೆಕ್ಸ್‌ ಮಾಲಕರ ಮಾನವೀಯ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next