Advertisement
ಧರ್ಮ, ದೇವರು, ಧರ್ಮಾಚರಣೆ, ಧರ್ಮ ಪರಂಪರೆಗಳನ್ನು ಭಾವನಾತ್ಮಕ ಸಂಬಂಧದ ಮುಕ್ತ ನೆಲೆಯಲ್ಲಿ ಸ್ವೀಕರಿಸಿದಾಗ ಅನುಭಾವದ ಅನುಭೂತಿ ಗೋಚರವಾಗುತ್ತದೆ. ಭಗವಂತನೊಂದಿಗೆ ನಡೆಸುವ ನಿತ್ಯದ ಅನುಸಂಧಾನದಲ್ಲಿ ಚಿದೆºಳಗನ್ನು ಕಾಣುವುದೂ ಸಹ ಧರ್ಮ ಸಂಸ್ಕಾರದ ನೆರಳಿನಲ್ಲಿಯೇ ನಡೆಯುತ್ತದೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಧರ್ಮ ಪರಂಪರೆಯನ್ನು ಒಳಗೊಂಡಿದೆ.
Related Articles
Advertisement
ಆಧ್ಯಾತ್ಮ ಬದುಕಿನ ಆರಂಭಿಕ ಹಂತದಿಂದ ಅಂತ್ಯದಲ್ಲಿ ನಡೆಯುವ ನಿರ್ವಿಕಲ್ಪ ಸಮಾಧಿ ಸ್ಥಿತಿಯವರೆಗಿನ ವಿವಿಧ ಹಂತಗಳ ಸಾಧಕರು, ಪ್ರಚಾರಕರು, ಪ್ರತಿಪಾದಕರನ್ನು ಹಿಂದೂ ಧರ್ಮವು ತನ್ನ ವಿಶಾಲ ಆಶ್ರಯದಲ್ಲಿ ಸೇರಿಸಿಕೊಂಡಿದೆ. ಸತ್ಯದ ಬೆಳಕಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸಿ ಧನ್ಯರಾಗಲು ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸದವಕಾಶಗಳಿವೆ.
ಸಹಸ್ರಾರು ಸಂವತ್ಸರಗಳಿಂದ ಹಿಂದೂ ಧರ್ಮವು ಅನೇಕ ವಿಧದ ವೈರುಧ್ಯಗಳನ್ನು, ದಾಳಿಗಳನ್ನು ಸಹಿಸಿಕೊಂಡು ಎದುರಿಸಿ ಪ್ರಸಂಗಾವಧಾನ ಪ್ರವಾಹದ ವಿರುದಟಛಿವೂ ಈಜಿ ದಡ ಸೇರಿ ಸಂಪೂರ್ಣ ಚೈತನ್ಯಯುಕ್ತವಾಗಿ ಇಂದಿಗೂ ಉಳಿದು ಬೆಳೆದು ಬಂದಿದೆ. ದೇವರು-ಪ್ರಪಂಚ, ಜಗತ್ತು-ಮಾನವ, ಜನನ-ಮರಣ, ಸುಖ-ದುಃಖ ಇತ್ಯಾದಿ ಜೀವನ ವಿಧಾನದ ವಿಚಾರಗಳಿಗೆ ನಿರಂತರ ಬೆಳಕು ಚೆಲ್ಲಿ ಮನುಕುಲದ ಬದುಕು ಮಹೋನ್ನತ
ಸಾಧನೆಯಾದ ಸಾûಾತ್ಕಾರ ಸಂಪಾದನೆಗೆ ತೆರೆದುಕೊಳ್ಳುವಂತೆ ಮಾಡುವ ವಿಶಿಷ್ಟ ಶಕ್ತಿಸಂಚಯ ಹಿಂದೂ ಧರ್ಮದಲ್ಲಿದೆ. ಉಡುಪಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಹಿರಿತನದಲ್ಲಿ ನವೆಂಬರ್ 24, 25 ಹಾಗೂ 26ರಂದು ಆಯೋಜನೆಗೊಂಡಿರುವ ಧರ್ಮ ಸಂಸದ್ ಹಿಂದೂಧರ್ಮದ ವಿಭಿನ್ನ ನೆಲೆ ಮೂಲಗಳ ಮೌಲಿಕ ಅಂಶಗಳತ್ತ ಬೆಳಕು ಚೆಲ್ಲಲಿದೆ.
ಆ ಮೂಲಕ ನಮ್ಮ ಭಾರತೀಯ ನೆಲದ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಆಚರಣೆಗಳು ಇನ್ನಷ್ಟು, ಮತ್ತಷ್ಟು ಬಲಗೊಳ್ಳಲಿವೆ. ಪರಮ ದಯಾಳು ಪಾರ್ವತಿ- ಪರಮೇಶ್ವರರು, ಜಗದಾದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು ನಾಡಿನ ಸಮಸ್ತ ಜನತೆಗೆ ಆಯುರಾರೋಗ್ಯ ಭಾಗ್ಯ, ಸುಖ, ಸಂಪದಗಳನ್ನು ಕರುಣಿಸಲೆಂದು ಹೃದಯ ತುಂಬಿ ಹಾರೈಸುತ್ತೇವೆ. -ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ, ಶಿವಾಚಾರ್ಯ ಭಗವತ್ಪಾದರು,
ಶ್ರೀ ರಂಭಾಪುರಿ ಜಗದ್ಗುರುಗಳು, ಬಾಳೆಹೊನ್ನೂರು