Advertisement

ಕಣ್ಣಿನ ಒತ್ತಡ ನಿವಾರಣೆ

09:21 PM Sep 30, 2019 | mahesh |

ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ನಾವು ದಿನದ ಹೆಚ್ಚು ಸಮಯ ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳ ಮುಂದೆ ಇರುವ ಕಾರಣ ಈ ದೃಷ್ಟಿಯಲ್ಲಿ ಕಣ್ಣಿನ ರಕ್ಷಣೆ ಮಾಡಬೇಕಾಗುತ್ತದೆ. ಈ ಕುರಿತು ವೈದ್ಯರು ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.

Advertisement

ಕಣ್ಣಿಗೆ ವಿಶ್ರಾಂತಿಯಿರಲಿ
ನಾವು ಹೊರಗಡೆಯಿಂದ ಬಂದಾಗ ನಮ್ಮ ಕಣ್ಣಿಗೆ ಒಂದಿಷ್ಟು ಸಮಯ ವಿಶ್ರಾಂತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸುಮಾರು 2-3 ನಿಮಿಷ ಕಣ್ಮುಚ್ಚಿ ಕಣ್ಣಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಸರಿಯಾಗಿ ನಿದ್ದೆಯನ್ನು ಕೂಡ ಮಾಡಬೇಕಾಗುತ್ತದೆ. ಇದರಿಂದ ದೇಹಕ್ಕೂ ಹಾಗೂ ಕಣ್ಣಿಗೂ ವಿಶ್ರಾಂತಿ ನೀಡಿದಂತಾಗುತ್ತದೆ. ಇನ್ನು ದಿನದಲ್ಲಿ ತಾಸುಗಟ್ಟಲೇ ಮೊಬೈಲ್‌, ಕಂಪ್ಯೂಟರ್‌. ಲ್ಯಾಪ್‌ಟಾಪ್‌ ಬಳಸಿದ ಅನಂತರ ನಾವು 5-10 ನಿಮಿಷಗಳ ಕಾಲ ಕಣ್ಣನ್ನು ಮುಚ್ಚಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದರಿಂದ ತಲೆನೋವು, ಕಣ್ಣಿನ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಕಣ್ಣನ್ನು ಅಲುಗಾಡಿಸಿ
ಸೂಕ್ಷ್ಮ ಅಂಗವಾದ ಕಣ್ಣನ್ನು ದಿನದಲ್ಲಿ 7-10 ಬಾರಿಯಾದರೂ ಗಡಿಯಾರ ಸುತ್ತುವಿನಂತೆ ತಿರುಗಾಡಿಸಬೇಕಾಗುತ್ತದೆ. ಇದರಿಂದ ಕಣ್ಣಿನ ರಕ್ಷಣೆ ಮಾಡಬಹುದು.

ಐ ಡ್ರಾಪ್‌ ಹಾಕಿ
ದಿನದಲ್ಲಿ ಹೆಚ್ಚು ಸಮಯ ಹೊರಗಡೆ ತಿರುಗಾಡಬೇಕಾದ ಕಾರಣ ಕಣ್ಣಿಗೆ ಧೂಳು ಬಿದ್ದಿರುತ್ತದೆ. ಧೂಳು ಬಿದ್ದಾಗಲೇ ಶುದ್ಧ ನೀರಿನಿಂದ ಅದನ್ನು ತೆಗೆಯಬೇಕು. ಹಾಗೇ ದಿನಾ ಮಲಗುವಾಗ ಐ -ಡ್ರಾಪ್‌ ಲಿಕ್ವಿಡ್‌ಗಳನ್ನು ಹಾಕಿ ಮಲಗಬೇಕು. ಇದರಿಂದ ಕಣ್ಣಿನ ರಕ್ಷಣೆ ಸಾಧ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.

ನಿರಂತರ ವಿಶ್ರಾಂತಿ
ಹವಾನಿಯಂತ್ರಿತ ಕೋಣೆಯಲ್ಲಿದ್ದುಕೊಂಡು ಕೆಲಸ ನಿರ್ವಹಿಸುವವರಿಗೆ ಹೆಚ್ಚು ಕಣ್ಣಿನ ಸಮಸ್ಯೆಗಳು ಕಾಣಬಹುದು. ಆ ಪರಿಸರದಿಂದ ಅವರ ಕಣ್ಣು ಒಣಗಿರುತ್ತವೆ. ದಿನದ ಒಂದು ಬಾರಿಯಾದರೂ ಶುದ್ಧ ನೀರಿನಲ್ಲಿ ಕಣ್ಣನ್ನು ಅದ್ದಿ ತೆಗೆಯಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next