Advertisement

ಶೀತಕ್ಕೆ ಆರಾಮ ಸಿಗಲು…

06:11 PM Dec 10, 2019 | mahesh |

ಶೀತ, ಕೆಮ್ಮು ಇದ್ದಾಗ ಏನೇನು ಮಾಡಬೇಕು ಅಂತೆಲ್ಲಾ ಗೊತ್ತೇ ಇದೆ. ಕಷಾಯ ಕುಡಿಯಬೇಕು, ದೇಹವನ್ನು ಬೆಚ್ಚಗಿಡಬೇಕು ಇತ್ಯಾದಿ. ಆದರೆ, ಏನೇನೆಲ್ಲಾ ತಿನ್ನಬಾರದು ಅಂತ ಗೊತ್ತಿದೆಯಾ?

Advertisement

– ದೇಹದಲ್ಲಿ ಕಫ‌ ಹೆಚ್ಚಾಗುವಂತೆ ಮಾಡುವ ಮೊಸರು, ಯೋಗರ್ಟ್‌ನಿಂದ ದೂರವಿರಿ.
– ಶೀತ- ಜ್ವರ ಇದ್ದಾಗ ನೀರು ಕುಡಿಯುತ್ತಾ ಇರಬೇಕು. ಆದರೆ, ಹಣ್ಣಿನ ರಸ ಸೇವಿಸುವುದು ಒಳ್ಳೆಯದಲ್ಲ. ಜ್ಯೂಸ್‌ನಲ್ಲಿರುವ ಸಕ್ಕರೆ ಅಂಶವು, ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.
– ಶೀತವಿದ್ದಾಗ ನಾಲಗೆ ಜಡ್ಡುಗಟ್ಟಿ ಕುರುಕಲು ತಿಂಡಿಗಳನ್ನು ತಿನ್ನೋಣ ಅನ್ನಿಸೋದು ಸಹಜ. ಹಾಗೇನಾದ್ರೂ ನಾಲಗೆಯ ಮಾತು ಕೇಳಿದಿರೋ, ಕೆಮ್ಮು ಹೆಚ್ಚಾಗೋದು ಖಂಡಿತ.
– ನೆಗಡಿಯಿದ್ದಾಗ ಆದಷ್ಟು ಸಪ್ಪೆ ಇರುವ ಆಹಾರ ಸೇವಿಸಿ.
– ಶೀತ-ತಲೆನೋವಿಗೆ ಕಾಫಿ ರಾಮಬಾಣ ಅನ್ನುವ ಮಾತಿದೆ. ಆದರೆ, ಕಾಫಿ ಕುಡಿಯುವುದರಿಂದ ಗಂಟಲು ಒಣಗಿ, ಕೆಮ್ಮು ಹೆಚ್ಚಾಗುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next