Advertisement

ಅಪಾಯಕಾರಿ ಹಂಪ್‌ಗೆ ಪರಿಹಾರ

12:23 AM Jun 27, 2019 | mahesh |

ಕಡಬ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ಹಂಪ್‌ (ರಸ್ತೆ ಉಬ್ಬು) ನಿರ್ಮಿಸಲಾಗಿದ್ದು, ವಾಹನಗಳು ಅಪಘಾತಕ್ಕೀಡಾಗುತ್ತಿದೆ ಎನ್ನುವ ಸಾರ್ವಜನಿಕರ ದೂರಿಗೆ ಸ್ಪಂದಿಸಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಅಧಿಕಾರಿಗಳು ಹಂಪ್‌ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ.

Advertisement

ಹೊಸಮಠ ಸೇತುವೆ ಬಳಿ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿ ನಿರ್ಮಿಸಲಾಗಿದ್ದ ಹಂಪ್‌ (ರಸ್ತೆ ಉಬ್ಬು) ನಿಂದಾಗಿ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರುಗಳ ಅಡಿಭಾಗ ಈ ಹಂಪ್‌ಗೆ ತಾಗಿ ಬಿಡಿ ಭಾಗಗಳಿಗೆ ಹಾನಿಯಾಗಿ ನಷ್ಟ ಸಂಭವಿಸಿದ ಘಟನೆಗಳೂ ನಡೆದಿದ್ದವು.

ಹಂಪ್‌ನಿಂದಾಗಿ ಆಗುತ್ತಿರುವ ಸಮಸ್ಯೆಗಳ ಕುರಿತು ‘ಉದಯವಾಣಿ’ ಸುದಿನ ವರದಿಗೆ ಸ್ಪಂದಿಸಿರುವ ಕೆಆರ್‌ಡಿಸಿಎಲ್ ಎಂಜಿನಿಯರ್‌, ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೇತುವೆಯ ಎರಡೂ ತುದಿಗಳಲ್ಲಿನ ಸಂಪರ್ಕ ರಸ್ತೆಗೆ ನಿರ್ಮಿಸಲಾಗಿದ್ದ ಹಂಪ್‌ಗ್ಳಲ್ಲಿ ಸಲೀಸಾಗಿ ವಾಹನ ಚಲಿಸುವ ರೀತಿಯಲ್ಲಿ ಸ್ವಲ್ಪ ಮಟ್ಟಿನ ಮಾರ್ಪಾಟು ಮಾಡಿದ್ದಾರೆ.

ಸ್ವಲ್ಪ ಮಾರ್ಪಾಟು ಮಾಡಿದ್ದೇವೆ

ನಾವು ಇಲಾಖೆಯಿಂದ ಸೂಚಿಸಲ್ಪಟ್ಟ ಅಳತೆ ಹಾಗೂ ಮಾದರಿಯಲ್ಲಿಯೇ ಹೊಸಮಠದಲ್ಲಿ ವೈಜ್ಞಾನಿಕ ರೀತಿಯಲ್ಲೇ ರಸ್ತೆ ಉಬ್ಬು ನಿರ್ಮಿಸಿದ್ದೆವು. ಅಲ್ಲಿ 30 ಕಿ.ಮೀ. ವೇಗದಲ್ಲಿ ವಾಹನಗಳನ್ನು ಚಲಾಯಿಸಬೇಕೆನ್ನುವ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ರಸ್ತೆ ಉಬ್ಬಿನಲ್ಲಿ ಸ್ವಲ್ಪಮಟ್ಟಿನ ಮಾರ್ಪಾಟು ಮಾಡಿದ್ದೇವೆ.
– ಪ್ರಸನ್ನ ದರ್ಬೆ, ಎಂಜಿನಿಯರ್‌, ಕೆಆರ್‌ಡಿಸಿಎಲ್
Advertisement

Udayavani is now on Telegram. Click here to join our channel and stay updated with the latest news.

Next