Advertisement

ಸಿಎಂಗೆ ತಾಲೂಕು ಸ್ಥಿತಿಗತಿಗಳ ಮಾಹಿತಿ ರವಾನೆ

06:15 AM May 27, 2020 | Team Udayavani |

ಕೆ.ಆರ್‌.ಪೇಟೆ: ತಾಲೂಕಿನಲ್ಲಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಪ್ರತಿದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತಿದ್ದಾರೆ ಎಂದು  ಸಚಿವ ನಾರಾಯಣಗೌಡ ತಿಳಿಸಿದರು.

Advertisement

ಸೀಲ್‌ಡೌನ್‌ ಆಗಿರುವ ಮರುವನಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಪಡಿತರ ಕಿಟ್‌ ವಿತರಿಸಿ ಮಾತನಾಡಿ, ಕೊರೊನಾ ಸೋಂಕಿನಿಂದ ಆತಂಕಕ್ಕೆ ಒಳಗಾಗದೆ, ಜಾಗ್ರತೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.  ಸರ್ಕಾರ ನಿಮ್ಮ ಗ್ರಾಮಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಎಲ್ಲರೂ ಮನೆಗಳಲ್ಲಿಯೇ ಇದ್ದು ಕೊರೊನಾ ತಡೆಗೆ ಸಹಕರಿಸಬೇಕೆಂದರು.

ಯಾವುದೇ ಕಾರಣಕ್ಕೂ ಯಾರೂ ಅಧಿಕಾರಿಗಳ ಕಣ್ಣುತಪ್ಪಿಸಿ ಗ್ರಾಮದಿಂದ  ಹೊರಹೋಗುವುದು. ಗ್ರಾಮಕ್ಕೆ  ಯಾರೂ ಅಕ್ರಮ ಪ್ರವೇಶ ಮಾಡಬಾರದು. ಈಗ ಮರುವನಹಳ್ಳಿಗೆ ಒಬ್ಬ ವ್ಯಕ್ತಿಯ ಅಕ್ರಮ ಪ್ರವೇಶದಿಂದಾಗಿಸಮಸ್ಯೆ ಎದುರಾಗಿದೆ. ಹೊರಗಿನಿಂದ ಬರುವವರು  ಮೊದಲು ತಪಾಸಣೆ ಮಾಡಿಸಿಕೊಂಡು  ಗ್ರಾಮಕ್ಕೆ ಬರಬೇಕು ಎಂದರು.

ಇದೇ ವೇಳೆ ಹಿರಿಯ ನಾಗರೀಕರು ಸಂಧ್ಯ, ಸುರಕ್ಷಾ, ವೃದಾಪ್ಯ ಪಿಂಚಣಿ ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ ಎಂದು ದೂರಿದರು. ನಿಮ್ಮ ಸಮಸ್ಯೆ ಕೂಡಲೇ ಬಗೆಹರಿಸುವುದಾಗಿ ನಾರಾಯಣಗೌಡರು  ಹೇಳಿದರು. ಈ ವೇಳೆ ಮುಡಾ ಅಧ್ಯಕ್ಷ ಶ್ರೀನಿವಾಸ್‌, ಎಸಿ ಶೈಲಜಾ, ತಹಶೀಲ್ದಾರ್‌ ಶಿವಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಅಂಬರೀಶ್‌, ಪಿಡಿಒಗಳಾದ ನಾಯಿದಾ ಅಕ್ತರ್‌, ಯಶಸ್ವಿನಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next