Advertisement

ಬಾಕಿ 35 ಕೋಟಿ ರೂ. ಬಿಡುಗಡೆಗೊಳಿಸಿ; ಟಿ.ಕೃಷ್ಣಪ್ಪಗೌಡ

06:24 PM Feb 10, 2021 | Team Udayavani |

ಯಾದಗಿರಿ: ಕೆಲ ರಾಜ್ಯಗಳಲ್ಲಿ ಪಡಿತರ ವಿತರಕರ ಕಮಿಷನ್‌ 200ರಿಂದ 250 ರೂ. ನೀಡಲಾಗುತ್ತಿದ್ದು, ರಾಜ್ಯದಲ್ಲಿಯೂ ಕಮಿಷನ್‌ ಹೆಚ್ಚಳ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರ ಕ್ರಮಕೈಗೊಳ್ಳಲು ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಡಾ| ಟಿ.ಕೃಷ್ಣಪ್ಪಗೌಡ ಒತ್ತಾಯಿಸಿದರು.

Advertisement

ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಡಿತರ ವಿತರಕರ ಸಂಘದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಈಗಾಗಲೇ ಪಡಿತರ ವಿತರಕರಿಗೆ ಬಾಕಿ ಇರುವ 35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಬಾಕಿ ಇರುವ 100 ಕೋಟಿ ರೂ.ಗಳು ಶೀಘ್ರ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವೊಲಿಸುವುದಾಗಿ ಹೇಳಿದರು.

ಕರ್ನಾಟಕದಲ್ಲಿ ನಮ್ಮ ಸಂಘಟನೆ ಹೋರಾಟ ಮಾಡುತ್ತಾ ಬಂದ ಪರಿಣಾಮ 15 ರೂ.ಗಳಿಂದ 60 ರೂ.ಗಳು ನಂತರ 75 ರೂ.ಗಳು ಇದ್ದುದ್ದನ್ನು ಈದೀಗ 100 ರೂ.ಗಳಿಗೆ ಸರ್ಕಾರ ಹೆಚ್ಚಳ ಮಾಡಿದ್ದು, ಪಡಿತರ ವಿತರಕರಿಗೆ 200 ರೂ. ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪಡಿತರ ವಿತರಕರ ಸಂಘದ ಅಧ್ಯಕ್ಷ ಆರ್‌. ಮಹಾದೇವಪ್ಪ ಅಬ್ಬೆತುಮಕೂರು ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ನಾಯಕ, ಚೆನ್ನಮಲ್ಲಪ್ಪ ಘಂಟಿ, ಚೆನ್ನಕೇಶವ ಗೌಡ ಮಂಡ್ಯ, ಬಿ. ದೇವರಾಜು, ಬಿ. ಸುಬ್ಬರಾಜು, ಸೋಮನಾಥ ರೆಡ್ಡಿ ಬಾಲಚೇಡ್‌, ಚಂದ್ರಶೇಖರ ಕುರ್ಡಿ, ರವಿ ಶಿರಸ್ತೆದಾರ ಯಾದಗಿರಿ, ಚೆನ್ನಕೇಶವ ನಾಯಕ ರಾಯಚೂರು, ಹನುಮೇಶ, ಬಸವರಾಜಪ್ಪ ಗೌಡ, ಸೋಮಶೇಖರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next