Advertisement

ನಗರದ ಕೆರೆಗಳಲ್ಲಿ ತಗ್ಗಿದ ಮಾಲಿನ್ಯ; ಗುಣಮಟ್ಟ ಅಷ್ಟಕ್ಕಷ್ಟೆ

05:23 AM Jun 14, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಘೋಷಣೆಯಾದ ನಂತರ ವೃಷಭಾವತಿ ನದಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಸೇರಿದಂತೆ ಹಲವು ಕೆರೆಗಳಲ್ಲಿ ಮಾಲಿನ್ಯ ಪ್ರಮಾಣ ಸಲ್ಪ ಮಟ್ಟಿಗೆ ಇಳಿಕೆಯಾಗಿದೆ, ಆದರೆ ಕೆರೆಗಳಲ್ಲಿನ ನೀರಿನ  ಗುಣಮಟ್ಟ ದಲ್ಲಿ ಸುಧಾರಣೆ ಯೇನೂ ಆಗಿಲ್ಲ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

Advertisement

ಈ ವಿಚಾರವಾಗಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ  ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌. ಓಕಾ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಬಂದ್‌  ಆಗಿದ್ದರಿಂದ ತ್ಯಾಜ್ಯ ನೀರು ಕೆರೆಗಳಿಗೆ ಹರಿದಿಲ್ಲ.

ಹೀಗಾಗಿ, ಕೆರೆಗಳಲ್ಲಿನ ನೀರು ತಿಳಿಯಾಗಿದೆ. ನೀರಿನ ಪರೀಕ್ಷೆ ನಡೆಸಿದಾಗ ಮಾಲಿನ್ಯ ಮಟ್ಟ ತಗ್ಗಿರುವುದು ಕಂಡುಬಂದಿದೆ. ಅಲ್ಲದೆ, ಲಾಕ್‌ಡೌನ್‌ ವೇಳೆ ವೃಷಭಾವತಿ ನದಿ ಕಣಿವೆಯ 26 ಕೇಂದ್ರಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಯಿತು. ಆ ಪ್ರಯೋಗಾ ಲಯದ ವರದಿ ಪ್ರಕಾರ ಹಂಪಾಪುರ ಕೆರೆ ಹೊರತುಪಡಿಸಿ ಉಳಿದಂತೆ ಕೆರೆಗಳ ನೀರಿನ ಗುಣಮಟ್ಟದಲ್ಲಿ ಬದಲಾವಣೆ ಯಾಗಿಲ್ಲ ಎಂದು ವರದಿ ಹೇಳಿದೆ.

ವರದಿ ಪರಿಶೀಲಿಸಿದ ನ್ಯಾಯಪೀಠ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪ್ರದೇಶದ ಕೈಗಾರಿಕಾ ಘಟಕಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡುವ ಅಧಿಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ನೇಮಕ  ಮಾಡಿರುವ ಸಮಿತಿಗೆ ಇದೆಯೇ- ಇಲ್ಲವೇ ಎಂಬ ಸ್ಪಷ್ಟನೆ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next