Advertisement

ಪೆಟ್ರೋಲ್‌-ಡೀಸೆಲ್‌ ವಾಹನ ಬಳಕೆ ತಗ್ಗಿಸಿ

06:23 PM Apr 01, 2021 | Team Udayavani |

ಕಲಬುರಗಿ: ವಿದ್ಯುತ್‌ ಮತ್ತು ಬ್ಯಾಟರಿ ಚಾಲಿತ ವಾಹನಗಳ ಬಳಕೆಯಿಂದ ವಾಯು ಮಾಲಿನ್ಯ ನಿಯಂತ್ರಣದೊಂದಿಗೆ ಹಣ ಉಳಿತಾಯವೂ ಸಾಧ್ಯವಾಗುತ್ತದೆ ಎಂದು ರಾಜ್ಯ ಸಾರಿಗೆ ಇಲಾಖೆ ಅಪರ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಶಿವರಾಜ ಬಿ. ಪಾಟೀಲ ಹೇಳಿದರು.

Advertisement

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾರಿಗೆ ಇಲಾಖೆ, ವಿಟಿಯು ಪ್ರಾದೇಶಿಕ ಕಚೇರಿ ಮತ್ತು ಸ್ನಾತಕೋತ್ತರ ಕೇಂದ್ರ, ಪಿಡಿಎ ಇಂಜಿನಿಯರಿಂಗ್‌ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿದ್ಯುತ್‌ ಚಾಲಿತ ವಾಹನಗಳ ಸುಸ್ಥಿರತೆ ಹಾಗೂ ಚಾರ್ಜಿಂಗ್‌ ಸೌಲಭ್ಯಗಳ ಅಭಿವೃದ್ಧಿ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೆಟ್ರೋಲ್‌, ಡೀಸೆಲ್‌ ಇಂಧನ ಆಧಾರಿತ ವಾಹನಗಳನ್ನು ಸಾಧ್ಯವಾದಷ್ಟು ಬಳಸುವುದನ್ನು ನಿಲ್ಲಿಸಿದರೆ, ಕಲುಷಿತ ಗಾಳಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಗಟ್ಟಲು ಸಾಧ್ಯವಿದೆ. ಭಾರತವು ವಿದೇಶಗಳಿಂದ ಕಚ್ಚಾತೈಲ ತರಿಸಿಕೊಳ್ಳಲು ಪ್ರತಿ ವರ್ಷ ಏಳು ಲಕ್ಷ ಕೋಟಿ ರೂ. ಶೇ.10ರಷ್ಟು ಪೆಟ್ರೋಲ್‌, ಡೀಸೆಲ್‌ ಮೇಲಿನ ಅವಲಂಬನೆ ಕಡಿಮೆಯಾದರೆ ವಾರ್ಷಿಕವಾಗಿ 70 ಸಾವಿರ ಕೋಟಿ ಉಳಿತಾಯವಾಗುತ್ತದೆ. ಹೀಗಾಗಿ ಪರ್ಯಾಯ ಇಂಧನ ಬಳಕೆಯಿಂದ ಪರಿಸರವು ಕಾಪಾಡಬಹುದು ಜತೆಗೆ ಆರ್ಥಿಕ ಉಳಿತಾಯವು ಮಾಡಬಹುದು ಎಂದು ಹೇಳಿದರು.

ಪೆಟ್ರೋಲ್‌, ಡೀಸೆಲ್‌ ಆಧಾರಿತ ವಾಹನಗಳ ಬಳಕೆ ನಿಲ್ಲಿಸಿ, ವಿದ್ಯುತ್‌, ಇಥೆನಾಲ್‌, ಸೋಲಾರ್ ನಂತ ಪರ್ಯಾಯ ಇಂಧನಗಳನ್ನು ಈಗಿನಿಂದಲೇ
ಬಳಕೆ ಮಾಡಲು ಮುಂದಾದರೆ ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ಹೊಂದಿದಂತೆ ಆಗುತ್ತದೆ. ಕಲಬುರಗಿಯಂತ ಹೆಚ್ಚು ಬಿಸಿಲಿನ ಪ್ರದೇಶಗಳಲ್ಲಿ ಸೌರಶಕ್ತಿಯನ್ನು
ಸಮರ್ಥವಾಗಿ ಬಳಸಿಕೊಳ್ಳಬೇಕು. ಬೆಂಗಳೂರಿನಲ್ಲಿ 26 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಕಾರು, ಸ್ಕೂಟರ್‌ ಗಳು ಮಾರಾಟವಾಗಿವೆ. ಕಲಬುರಗಿಯಲ್ಲಿ ಎಲೆಕ್ಟ್ರಿಕ್‌
ಆಟೋ, ಸ್ಕೂಟರ್‌ ಶೋರೂಮ್‌ಗಳಿದ್ದರೂ ಹೆಚ್ಚು ವಾಹನ ಮಾರಾಟವಾಗಿಲ್ಲ. ಈ ಕುರಿತಂತೆ ಮತ್ತಷ್ಟು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪರಿಸರ
ಸ್ನೇಹಿ ವಾಹನಗಳ ಬಳಕೆಯಿಂದ ಪರಿಸರ ಕಾಳಜಿ ತೋರಿದಂತೆ ಆಗಲಿದೆ ಎಂದು ಹೇಳಿದರು.

ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ| ಬಸವರಾಜ ಗಾದಗೆ ಮಾತನಾಡಿ, ಪೆಟ್ರೋಲ್‌, ಡಿಸೇಲ್‌ಗೆ ಪರ್ಯಾಯ ಇಂಧನ ಬಳಕೆಗೆ ಒತ್ತು ಕೊಡಬೇಕು.
ಸದ್ಯ ದೇಶದಲ್ಲಿ ಸೌರ ವಿದ್ಯುತ್‌ ಬಳಸಲು ಹೆಚ್ಚು ಗಮನ ಹರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

Advertisement

ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಎಸ್‌. ಹೆಬ್ಟಾಳ ಮಾತನಾಡಿ, ಪರಿಸರ ಕಾಳಜಿ ಹೊಂದುವುದು ಈಗಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನಗಳಲ್ಲಿನ ಸಾಧ್ಯತೆಗಳನ್ನು ಆವಿಷ್ಕರಿಸಲು ಪಿಡಿಎ ಕಾಲೇಜು ಮುಂಚೂಣಿಯಲ್ಲಿದೆ. ಇದಕ್ಕೆ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸಹಕಾರ ನೀಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ವಿಟಿಯು ಸಹ ಪ್ರಾಧ್ಯಾಪಕ ಎಂ.ಸಿ. ಮಠ ಮಾತನಾಡಿದರು. ನಂತರ ಇ-ಮೊಬಿಲಿಟಿ ಸುಸ್ಥಿರತೆ ಕುರಿತು ಎಲೆಕ್ಟ್ರಿಕ್‌ ವಾಹನಗಳ ಕನ್ಸ್‌ಲ್ಟಂಟ್‌ ಪ್ರಸಾದ್‌,
ಹೀರೊ ಎಲೆಕ್ಟ್ರಿಕ್‌ ವಾಹನಗಳ ಕುರಿತು ಸಗರ್ ಕುಲಕರ್ಣಿ, ಎಲೆಕ್ಟ್ರಿಕ್‌ ಬಸ್‌ ಕುರಿತು ವಿಷ್ಣುವರ್ಧನ ರೆಡ್ಡಿ, ಎಲೆಕ್ಟ್ರಿಕ್‌ ವಾಹನಗಳಿಗೆ ಚಾಜಿಂìಗ್‌ ಮೂಲ ಸೌಕರ್ಯ ಕುರಿತು ಬೆಸ್ಕಾಂ ಡಿಜಿಎಂ ಶ್ರೀನಾಥ, ಎಲೆಕ್ಟ್ರಿಕ್‌ ವಾಹನಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ ನೀತಿ-2017 ಕುರಿತು ಶಿವರಾಜ ಪಾಟೀಲ ವಿಷಯ ಮಂಡಿಸಿದರು.

ಉಪ ಸಾರಿಗೆ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ನೂರ ಮಹಮ್ಮದ್ ಭಾಷಾ, ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ, ಡಾ| ಶಂಭುಲಿಂಗಪ್ಪ, ವಿಟಿಯು ಕಾಲೇಜಿನ ಪ್ರಾಧ್ಯಾಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಾಹನಗಳಲ್ಲಿನ ಕಾರ್ಬನ್‌ ಪ್ರಮಾಣದಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಜನರಿಗೂ ಅಸ್ತಮಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ರಾಜ್ಯದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ನಿಗದಿತ ಮಾನದಂಡಗಳನ್ನು ಮೀರುತ್ತಿದೆ. ಹೀಗಾಗಿ ಜಿಲ್ಲೆಗಳನ್ನು ಕೆಂಪು ವಲಯಗಳೆಂದು (ರೆಡ್‌ ಝೋನ್‌) ಗುರುತಿಸಲಾಗಿದೆ. ಈ ಕುರಿತಂತೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಶಿವರಾಜ ಬಿ. ಪಾಟೀಲ, ಅಪರ ಆಯುಕ್ತ, ರಾಜ್ಯ ಸಾರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next